ಲೆಬನಾನ್ ತ್ಯಜಿಸುವಂತೆ ಭಾರತೀಯ ಪ್ರಜೆಗಳಿಗೆ ಭಾರತೀಯ ರಾಯಭಾರಿ ಕಚೇರಿ ಸಲಹೆ

Prasthutha|

ನವದೆಹಲಿ: ಲೆಬನಾನ್ ತ್ಯಜಿಸುವಂತೆ ಭಾರತೀಯ ಪ್ರಜೆಗಳಿಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದೆ.

- Advertisement -

ಲೆಬನಾನ್‌ನಲ್ಲಿ ಉಳಿದಿರುವವರು ಎಚ್ಚರಿಕೆ ವಹಿಸುವಂತೆಯೂ, ತಮ್ಮ ಸಂಚಾರವನ್ನು ನಿರ್ಬಂಧಿಸುವಂತೆಯೂ, ತನ್ನ ಸಂಪರ್ಕದಲ್ಲಿ ಇರುವಂತೆಯೂ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ.

ಬೈರೂತ್ ಮೇಲೆ ಇಸ್ರೇಲ್ ಮಂಗಳವಾರ ನಡೆಸಿದ ಲೆಬನಾನ್‌ನ ಹೋರಾಟ ಸಂಘಟನೆ ಹಿಜ್ಬುಲ್ಲಾದ ಉನ್ನತ ಸೇನಾ ಕಮಾಂಡರ್ ಫವಾದ್ ಶುಕ್ರ್ ಹತ್ಯೆಯಾದ ಹಿನ್ನೆಲೆಯಲ್ಲಿ ಸಲಹೆ ನೀಡಲಾಗಿದೆ.

- Advertisement -

ಮುಂದಿನ ನೋಟಿಸ್ ನೀಡುವ ವರೆಗೆ ಲೆಬನಾನ್‌ಗೆ ಪ್ರಯಾಣಿಸದಂತೆಯೂ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ ಎಂದು ಬೈರೂತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.



Join Whatsapp