ಎಸ್‌ಡಿಪಿಐ ರಕ್ಷಣಾ ತಂಡ ವಯನಾಡ್ ವಿಪತ್ತಿನ ಸ್ಥಳದಲ್ಲಿ ಸಕ್ರಿಯ, ಯಾವುದೇ ಸೇವೆಗೆ ಲಭ್ಯ: ಎಂ‌.ಕೆ. ಫೈಝಿ

Prasthutha|

ಬೆಂಗಳೂರು: ವಯನಾಡ್‌‌ನ ಚೂರಲ್‌ ಮಲಾ ಪ್ರದೇಶದಲ್ಲಿ ಸಂಭವಿಸಿದ ಭಯಂಕರ ಪ್ರಕೃತಿ ವಿಕೋಪದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವವರಿಗೆ ಎಸ್‌ಡಿಪಿಐ ಪಕ್ಷ ಸಂತಾಪ ಸೂಚಿಸುತ್ತದೆ ಮತ್ತು ದುಃಖತಪ್ತ ಕುಟುಂಬ ಸದಸ್ಯರ ದುಃಖದಲ್ಲಿ ಭಾಗಿಯಾಗುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ತಿಳಿಸಿದ್ದಾರೆ.

- Advertisement -

ಎಸ್‌ಡಿಪಿಐ ರಕ್ಷಣಾ ತಂಡದ ಸ್ವಯಂಸೇವಕರು ವಿಪತ್ತಿನ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯಾವುದೇ ಸೇವೆಗೆ ಲಭ್ಯವಿರುತ್ತಾರೆ ಎಂದೂ ಅವರು ತಿಳಿಸಿದ್ದಾರೆ.



Join Whatsapp