ರಾಯಚೂರು: ಮಸೀದಿಯಲ್ಲಿ ನಮಾಜ್ ಮಾಡುವ ವೇಳೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು

Prasthutha|

ರಾಯಚೂರು: ಮಸೀದಿಯಲ್ಲಿ ರಾತ್ರಿ ನಮಾಜ್ ಮಾಡುವ ವೇಳೆ ಕಿಡಿಗೇಡಿಗಳು ಬಿಯರ್ ಬಾಟಲಿ ಎಸೆದು ಪರಾರಿಯಾದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನಲ್ಲಿ ನಡೆದಿದೆ.

- Advertisement -


ನಮಾಜ್ ನಂತರ ಮುಸ್ಲಿಂ ಮುಖಂಡರು ಜಮಾಯಿಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ತಡರಾತ್ರಿವರೆಗೂ ಪ್ರತಿಭಟಸಿದರು . ತಕ್ಷಣವೇ ಪೊಲೀಸರು ಆಗಮಿಸಿ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.


ಕೆಲವೇ ಕ್ಷಣದ ಹೊತ್ತಿನಲ್ಲಿ ಪೊಲೀಸರು ಪರಿಶೀಲಿಸಿ ಇಬ್ಬರು ಯುವಕರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp