ಫಾಝಿಲ್ ಮಂಗಳಪೇಟೆ ಚಾರೀಟೆಬಲ್ ಟ್ರಸ್ಟ್’ನಿಂದ ರಕ್ತದಾನ ಶಿಬಿರ

Prasthutha|

ಸುರತ್ಕಲ್: ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ಫಾಝಿಲ್ ಮಂಗಳಪೇಟೆಯವರ 2ನೇ ವರ್ಷದ ಸ್ಮರಣಾರ್ಥ ಭಾನುವಾರ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಮದ್ರಸ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಮಂಗಳಪೇಟೆ ಎಂಜೆಎಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

- Advertisement -


ಎಂಜೆಎಂ ಖತೀಬ್ ಜೈದ್ ಬಾಹ್ಸನಿ ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಒಟ್ಟು 78 ಯುನಿಟ್ ರಕ್ತ ಸಂಗ್ರಹವಾಗಿದೆ.


ಫಾಝಿಲ್ ಮಂಗಳಪೇಟೆ ಮೆಮೋರಿಯಲ್ ಚಾರೀಟೆಬಲ್ ಟ್ರಸ್ಟ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ನಡಯಿತು.

- Advertisement -


ಕಾರ್ಯಕ್ರಮದಲ್ಲಿ ಫಾಝಿಲ್ ಅವರ ತಂದೆ, ಫಾಝಿಲ್ ಮಂಗಳಪೇಟೆ ಮೆಮೋರಿಯಲ್ ಚಾರೀಟೆಬಲ್ ಟ್ರಸ್ಟ್ ಗೌರವಾಧ್ಯಕ್ಷ ಫಾರೂಕ್, ಎಂಜೆಎಂ ಮದ್ರಸದ ಸದರ್ ಸಂಶುದ್ದೀನ್ ಅಹ್ಸನಿ, ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಫಾಝಿಲ್ ಸಹೋದರ ಆದಿಲ್, ಎಂಜೆಎಂ ಮಸೀದಿಯ ಪದಾಧಿಕಾರಿಗಳು, ಜಮಾಅತರು ಭಾಗವಹಿಸಿದ್ದರು.



Join Whatsapp