ಸುರತ್ಕಲ್ | ಹಾನಿಯಾದ ಮನೆಗಳು, ಶಾಲೆಗೆ SDPI ನಿಯೋಗ ಭೇಟಿ

Prasthutha|

ಮಂಗಳೂರು: ಸುರತ್ಕಲ್ ಚೊಕ್ಕಬೆಟ್ಟು ಪ್ರದೇಶದಲ್ಲಿ ನಿನ್ನೆ ಬೀಸಿದ ಬಾರಿ ಗಾಳಿ ಮಳೆಗೆ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆ SDPI ನಿಯೋಗದ ಸದಸ್ಯರು ಹಾನಿಗೊಳಗಾದ ಮನೆಗಳು ಮತ್ತು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

- Advertisement -


ಈ ಸಂದರ್ಭದಲ್ಲಿ SDPI ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಚೊಕ್ಕಬೆಟ್ಟು 5 ನೇ ವಾರ್ಡ್ ಕೌನ್ಸಿಲರ್ ಸಂಶಾದ್ ಅಬೂಬಕ್ಕರ್, ಸ್ಥಳೀಯ ಪಕ್ಷದ ನಾಯಕರಾದ ನೌಶಾದ್, ಶಬೀರ್ ಕೃಷ್ಣಾಪುರ, ನವಾಝ್ ಉಳ್ಳಾಲ ಮತ್ತಿತರರು ನಿಯೋಗದಲ್ಲಿದ್ದರು.



Join Whatsapp