ಬಜೆಟ್ ನಲ್ಲಿ ತಾರತಮ್ಯ: ಸಂಸತ್ ಎದುರು ‘ಇಂಡಿಯಾ’ ನಾಯಕರ ಪ್ರತಿಭಟನೆ

Prasthutha|

ನವದೆಹಲಿ: ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ತಾರತಮ್ಯ ಮಾಡಿದೆ ಎಂದು ಇಂಡಿಯಾ ಬಣದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಸಂಸತ್ತಿನ ಎದುರು ಬುಧವಾರ ಧರಣಿ ನಡೆಸಿದರು.

- Advertisement -


ಟಿಎಂಸಿ, ಸಮಾಜವಾದಿ ಪಕ್ಷದ ನಾಯಕರು, ಡಿಎಂಕೆ ನಾಯಕರು ಸೇರಿದಂತೆ ಹಲವು ನಾಯಕರು ಸಂಸತ್ತಿನ ಮಕರ ದ್ವಾರದಲ್ಲಿ ‘ನಮಗೆ ಭಾರತ ಬಜೆಟ್ ಬೇಕು ಎನ್ ಡಿಎ ಬಜೆಟ್ ಅಲ್ಲ’, ‘ಎನ್ ಡಿಎಯಿಂದ ಬಜೆಟ್ನಲ್ಲಿ ಭಾರತಕ್ಕೆ ದ್ರೋಹ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು.


ಈ ಕುರಿತು ಮಾತನಾಡಿದ ಖರ್ಗೆ, ‘ಈ ಬಜೆಟ್ ಜನ ವಿರೋಧಿಯಾಗಿದೆ, ಇದರಿಂದ ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಹೇಳಿದರೇ ಹೊರತು, ರಾಜ್ಯಗಳಿಗೆ ನೀಡುವ ವಿಶೇಷ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲೇ ಇಲ್ಲ. ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ’ ಎಂದು ವಾಗ್ದಾಳಿ ನಡೆಸಿದರು.



Join Whatsapp