ಉಡುಪಿ | ಮನೆಯಲ್ಲಿ ಅಗ್ನಿ ಅವಘಡ: ಬಾರ್ ಮಾಲೀಕನ ಪತ್ನಿ ಮೃತ್ಯು

Prasthutha|

ಉಡುಪಿ: ಅಂಬಲಪಾಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಶೆಟ್ಟಿ (50) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೇ ಘಟನೆಯಿಂದ ಆಕೆಯ ಪತಿ ರಮಾನಂದ ಶೆಟ್ಟಿ (55) ಜೂನ್ 15 ರಂದು ನಿಧನರಾಗಿದ್ದರು.

- Advertisement -


ಅಗ್ನಿ ಅವಘಡದಲ್ಲಿ ಉಸಿರಾಟದ ತೊಂದರೆಯಿಂದಾಗಿ ಬಹು ಅಂಗಾಂಗ ವೈಫಲ್ಯವಾಗಿ ಅಶ್ವಿನಿ ಶೆಟ್ಟಿ ಇವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು.


ಜೂನ್ 15 ರಂದು ರಮಾನಂದ ಮತ್ತು ಅಶ್ವಿನಿ ಶೆಟ್ಟಿ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಗೆ ಹೆಚ್ಚಿನ ಹಾನಿ ಮತ್ತು ನಿವಾಸಿಗಳಿಗೆ ಗಾಯಗಳಾಗಿವೆ. ಮೂರು ಅಂತಸ್ತಿನ ಮನೆಯ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ.

- Advertisement -


ಅಶ್ವಿನಿ ಶೆಟ್ಟಿ ಅವರು ಪ್ರಭಾವಿ ವ್ಲಾಗರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು.



Join Whatsapp