ಕಾರವಾರ ಡಿಪೋಗೆ ನುಗ್ಗಿದ ನೀರು: 50ಕ್ಕೂ ಹೆಚ್ಚು ಬಸ್ಸುಗಳು ಜಲಾವೃತ

Prasthutha|

ಕಾರವಾರ: ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ನಗರದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ಡಿಪೋ ಜಲಾವೃತವಾಗಿದೆ.

- Advertisement -


50ಕ್ಕೂ ಹೆಚ್ಚು ಬಸ್ಸುಗಳು ನೀರಿನಲ್ಲಿ ಜಲಾವೃತವಾಗಿದ್ದು, ವಿವಿಧ ಭಾಗಗಳಿಗೆ ತೆರಳುವ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ಹಬ್ಬುವಾಡ ರಸ್ತೆಯಲ್ಲಿ ಡಿಪೋ ಇದ್ದು ಬಸ್ಸುಗಳನ್ನು ಹೊರ ತೆಗೆಯಲು ಚಾಲಕರು ಹರಸಾಹಸ ಪಡುತ್ತಿದ್ದಾರೆ.

ಮೂರು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಚರಂಡಿ ನೀರು ಡಿಪೋಗೆ ನುಗ್ಗಿದ ಪರಿಣಾಮ ಸಮಸ್ಯೆಯಾಗಿದೆ.



Join Whatsapp