ರಾಹುಲ್ ಮೈಮುಟ್ಟುವ ತಾಕತ್ತು ನಿಮಗಿದೆಯೇ ಭರತ್ ಶೆಟ್ಟಿಯವರೇ?: ಗಿರೀಶ್ ಆಳ್ವ

Prasthutha|

ಮಂಗಳೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಸಕ ಭರತ್ ಶೆಟ್ಟಿ ವಿರುದ್ಧ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ ಕಿಡಿಗಾರಿದ್ದಾರೆ.

- Advertisement -

ರಾಹುಲ್ ಮೈಮುಟ್ಟುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದ ಗಿರೀಶ್ ಆಳ್ವ, ಶಾಸಕರಾಗಲು ನೀವು ನಾಲಾಯಕ್ ಎಂದಿದ್ದಾರೆ.

ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನೀವು ರಸ್ತೆ ಬದಿ ಪುಡಿ ರೌಡಿಗಳ ರೀತಿ ವರ್ತಿಸುತ್ತೀರಿ. ನಿಮ್ಮ ಚೇಲಾಗಳನ್ನು ಖುಷಿಪಡಿಸಲು ಈ ರೀತಿ ಅಸಂವಿಧಾನಿಕ ಮಾತುಗಳನ್ನಾಡುವುದನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದಿದ್ದಾರೆ.

- Advertisement -

ಈ ಜಿಲ್ಲೆಯ ಬಿಜೆಪಿ ಶಾಸಕರುಗಳು ತನ್ನ ಪಕ್ಷದೊಳಗೆ ನಾಯಕರಾಗಲು ಪೈಪೋಟಿಯಲ್ಲಿದ್ದಾರೆ. ಆದರೆ ನಿಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ನಿಮ್ಮ ಪೈಪೋಟಿ ತೋರಿಸಿ. ಈ ರೀತಿ ವಿವಾದತ್ಮಕ ಹೇಳಿಕೆಗಳಿಂದ ಅಲ್ಲ. ನಮ್ಮ ಯುವ ಕಾರ್ಯಕರ್ತರಿಗೂ ನಿಮ್ಮದೇ ಧಾಟಿಯಲ್ಲಿ ಉತ್ತರ ನೀಡಲು ಗೊತ್ತಿದೆ. ಆದರೆ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಗಿರೀಶ್ ಆಳ್ವ ಪ್ರಕಟಣೆ ಮೂಲಕ ಹೇಳಿದ್ದಾರೆ.



Join Whatsapp