ಅಮೆಮ್ಮಾರ್, SKSSF ವತಿಯಿಂದ ರಕ್ತದಾನ ಶಿಬಿರ

Prasthutha|

ಫರಂಗಿಪೇಟೆ: SKSSF ಫರಂಗಿಪೇಟೆ ಕ್ಲಸ್ಟರ್ ಹಾಗೂ ಅಮೆಮ್ಮಾರ್ ಶಾಖೆ, ವಿಖಾಯ ರಕ್ತದಾನಿ ಬಳಗ ದಕ ಜಿಲ್ಲೆ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರ, ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಇದರ ಸಹಯೋಗದಿಂದ ರಕ್ತದಾನ ಶಿಬಿರ ಹಾಗೂ ಹೈಲ್ಯಾಂಡ್ ಆಸ್ಪತ್ರೆ ಮಂಗಳೂರು ವತಿಯಿಂದ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ರವಿವಾರ ಅಮೆಮ್ಮಾರ್ ಮಸೀದಿ ಹಾಲ್‌ನಲ್ಲಿ ನಡೆಯಿತು.

- Advertisement -

ಶಿಬಿರದ ಅಧ್ಯಕ್ಷತೆಯನ್ನು ಬದ್ರಿಯಾ ಮಸೀದಿ ಅಧ್ಯಕ್ಷ ಉಮರಬ್ಬ ವಹಿಸಿದರು. ಇರ್ಷಾದ್ ದಾರಿಮಿ ಮಿತ್ತಬೈಲ್ ದುವಾ ಆಶೀರ್ವಚನಗೈದರು. ಅಮೆಮ್ಮಾರ್ ಬದ್ರಿಯಾ ಮದರಸ ಮುಖ್ಯೋಪಾದ್ಯಾಯ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಉದ್ಘಾಟನೆಗೈದರು

ಮುಖ್ಯ ಭಾಷಣ ಮಾಡಿದ SKSSF ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಕರಂಗಡಿ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ, ವ್ಯೆಯಕ್ತಿಕ ವಿಷಯಗಳಿಗೆ ಪ್ರಾಶಸ್ತ್ಯ ನೀಡುವುದಕ್ಕಿಂತ ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ವಿಶ್ವಾಸಿ ಪರಿಪೂರ್ಣತೆಗೆ ಹತ್ತಿರವಾಗುತ್ತಾನೆ. ಈ ನಿಟ್ಟಿನಲ್ಲಿ ಎಸ್ಕೆಎಸ್ಎಸ್ಎಫ್ ಇದರ ಅಧೀನದಲ್ಲಿ ಸುಮಾರು ಹದಿನೆಂಟು ವಿಭಾಗಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸೇವಾ ಕಾರ್ಯದೊಂದಿಗೆ ಸಕ್ರಿಯವಾಗಿ ಕಾರ್ಯಾಚರಿಸುತ್ತದೆ ಎಂದರು.

- Advertisement -

ಮುಖ್ಯ ಅತಿಥಿಗಳಾಗಿ ಅಮೆಮ್ಮಾರ್ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಫರಂಗಿಪೇಟೆ ಮಸೀದಿ ಖತೀಬ್ ಝಕರಿಯಾ ದಾರಿಮಿ, ಅಮೆಮ್ಮಾರ್ ಮಸೀದಿ ಉಪಾಧ್ಯಕ್ಷ ಎಫ್ಎ ಖಾದರ್, ಫರಂಗಿಪೇಟೆ ಮಸೀದಿ ಅಧ್ಯಕ್ಷ ಉಮರ್ ಫಾರೂಕ್, ಕೋಶಾಧಿಕಾರಿ ಮಜೀದ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಸದಸ್ಯ ರಜಾಕ್ ಅಮೆಮ್ಮಾರ್, ಪರಂಪೇಟೆ ರೇಂಜ್ ಮದರಸ ಮೆನೇಜ್ಮೆಂಟ್ ಅಧ್ಯಕ್ಷ ಹಸನಬ್ಬ ಗುಡ್ಡೆಮನೆ, ಎಸ್ಕೆಎಸ್ಎಸ್ಎಫ್ ಮಂಗಳೂರು ವಲಯ ಉಪಾಧ್ಯಕ್ಷ ರಶೀದ್ ಹನೀಫಿ, ಸಹಾಚಾರಿ ದಕ ಜಿಲ್ಲಾ ವೆಸ್ಟ್ ಚೇರ್ಮನ್ ನಝೀರ್ ವಳಚ್ಚಿಲ್, ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ಲ ಎಂಕೆಬಿ, ಪ್ರಧಾನ ಕಾರ್ಯದರ್ಶಿ ಶಾಕಿರ್ ಕುಂಪನಮಜಲ್, ಅಮೆಮ್ಮಾರ್ ಯುನಿಟ್ ಅಧ್ಯಕ್ಷ ಝುಬೇರ್, ಅಝೀಝ್ ಎಎಸ್ಬಿ, ಶಾಜೀದ್ ಒಡೆಯರ್ ಮತ್ತಿತರರು ಉಪಸ್ಥಿತರಿದ್ದರು

ಹೈಲ್ಯಾಂಡ್ ಆಸ್ಪತ್ರೆಯ ಡಾ| ಸಿಪಿ ಅಬ್ದುಲ್ಲಾ ಯಾಸೀರ್, SYS ರೆಂಜಲಾಡಿ ಶಾಖೆ ಅಧ್ಯಕ್ಷ ಎಮ್.ಎ. ಅಬ್ದುಲ್ಲಾ ರೆಂಜಲಾಡಿ, ಸಹಾಚಾರಿ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಮಾರಿಪಲ್ಲರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಎಸ್ಕೆಎಸ್ಎಸ್ಎಫ್ ಮಂಗಳೂರು ವಲಯ ಪ್ರಧಾನ ಕಾರ್ಯದರ್ಶಿ ನಿಯಾಝ್ ಫೈಝಿ ಸ್ವಾಗತಿಸಿ, ರಶೀದ್ ಹನೀಫಿ ಧನ್ಯವಾದಗೈದರು



Join Whatsapp