SDPI ಸಂಸ್ಥಾಪನಾ ದಿನದ ಶುಭಾಶಯ ಕೋರಿದ ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು SDPI ಪಕ್ಷದ ಸಂಸ್ಥಾಪನಾ ದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒಂದು ರಾಜಕೀಯ ಪಕ್ಷ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಚಳುವಳಿಯಾಗಿ ಸಾಗಿ ಬಂದಿದೆ.

ರಾಜಕೀಯ ಪಕ್ಷಗಳು ಕೇವಲ ಚುನಾವಣೆಗಳಿಗೆ ಸೀಮಿತವಾಗಿದ್ದರೆ ನಮ್ಮ ಪಕ್ಷ ಜನರ ಯಾವುದೇ ಸಂಕಷ್ಟಗಳಿಗೆ ಜೊತೆಯಾಗಿ ನಿಲ್ಲುವ ಸಂಗಾತಿಯಾಗಿದೆ. ಅದು ಸಾಂಕ್ರಾಮಿಕ ರೋಗಗಳ ಸಮಯವಾಗಿರಲಿ, ಪ್ರಕೃತಿ ವೈಪರೀತ್ಯಗಳ ಸನ್ನಿವೇಶವಾಗಿರಲಿ ಅಥವಾ ಯಾವುದೇ ದೌರ್ಜನ್ಯ, ದಬ್ಬಾಳಿಕೆಯ ಘಟನೆಯಾಗಿರಲಿ ಎಸ್.ಡಿ.ಪಿ.ಐ ಎಲ್ಲರಿಗಿಂತ ಮೊದಲು ಸಂತ್ರಸ್ತರ ನೆರವಿಗೆ ಧಾವಿಸಿರುತ್ತದೆ. ಜನರಪರ ಹೋರಾಟಗಳ ಮೂಲಕವೇ ಜನರ ಪರವಾಗಿ ಅಧಿಕಾರ ಹಿಡಿಯಬೇಕು ಮತ್ತು ಆ ಮೂಲಕ ಹಸಿವು ಮುಕ್ತ, ಭಯ ಮುಕ್ತ ಸಮಾಜವನ್ನು ನಿರ್ಮಿಸಬೇಕೆಂಬ ಧ್ಯೇಯದೊಂದಿಗೆ ಮುನ್ನುಗ್ಗುತ್ತಿದೆ. ಈ ಚಳುವಳಿ ರೂಪದ ರಾಜಕೀಯ ಹೋರಾಟದ ಭಾಗವಾಗಿರುವ ಪ್ರತಿಯೊಬ್ಬರಿಗೂ ಪಕ್ಷದ ಸಂಸ್ಥಾಪನಾ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.



Join Whatsapp