ಕೇರಳ SDPI ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ಜೂನ್ 9ಕ್ಕೆ ಮಂಜೇಶ್ವರಕ್ಕೆ

Prasthutha|

ಮಂಜೇಶ್ವರ : “ಇದುವೇ ದಾರಿ….ಇದುವೇ ಗೆಲುವು” ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ನಡೆಸುತ್ತಿರುವ ಕಾರ್ಯಕರ್ತರ ಸಮಾವೇಶದ ಭಾಗವಾಗಿ ಪಕ್ಷದ ಮಂಜೇಶ್ವರ ಮಂಡಲ ಸಮಾವೇಶ 09-06-2024 ರಂದು ಆದಿತ್ಯವಾರ ಸಾಯಂಕಾಲ 4.30 ಕ್ಕೆ ಸರಿಯಾಗಿ ಎ ಎಚ್ ಪಾಲೇಸ್ ಗಾಂಧಿನಗರದಲ್ಲಿ ನಡೆಸಲಿದ್ದೇವೆ. ಎಸ್ ಡಿ ಪಿ ಐ ಕೇರಳ ರಾಜ್ಯಾಧ್ಯಕ್ಷ ಮೂವಾಟ್ಟುಪ್ಪುಝ ಅಶ್ರಫ್ ಮೌಲವಿ ಉದ್ಘಾಟಿಸಲಿರುವ ಕಾರ್ಯಕ್ರದಲ್ಲಿ ಪಕ್ಷದ ಕಾರ್ಯಕರ್ತರು, ಕ್ಯಾಡೆಟ್ಟುಗಳು, ಜಿಲ್ಲಾ ಹಾಗೂ ಮಂಡಲ ನೇತಾರರು ಭಾಗವಹಿಸಲಿರುವರೆಂದು ಎಸ್ ಡಿ ಪಿ ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.



Join Whatsapp