ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆಯಲು ಶಿವಸೇನೆಯೂ ಕಾರಣ: ಸಂಜಯ್ ರಾವತ್

Prasthutha|

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಇಂಡಿಯಾ ಮೈತ್ರಿಕೂಟವು ಹೆಚ್ಚು ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುವಲ್ಲಿ ಶಿವಸೇನೆಯ ಪಾತ್ರವೂ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

- Advertisement -


ಕಾಂಗ್ರೆಸ್ ಹಾಗೂ ಎನ್ ಸಿಪಿಯ ಮತಗಳ ಹೆಚ್ಚಳದಲ್ಲಿ ಶಿವಸೇನೆ ಪಾತ್ರವಹಿಸಿದೆ ಎಂದು ನಿಮಗೆ ಅನಿಸುವುದಿಲ್ಲವೇ, ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಮಹಾರಾಷ್ಟ್ರಾದ್ಯಂತ ಪ್ರಚಾರ ಮಾಡದಿದ್ದರೆ ಹೀಗಾಗುತ್ತಿತ್ತೇ, ಮಹಾ ವಿಕಾಸ್ ಅಘಾಡಿ ಬಲವಾಗಿ ಕೆಲಸ ಮಾಡುತ್ತದೆ ಮತ್ತು ನಮ್ಮ ಮನಸ್ಸಿನಲ್ಲಿ ಯಾವುದೇ ಅಹಂಕಾರವಿಲ್ಲ ಎಂದರು. ಈ ಮೊದಲು ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದರೆ ನಾವು ವಿರೋಧಿಸುವುದಿಲ್ಲ ಅವರು ಬಹುರಾಷ್ಟ್ರೀಯ ನಾಯಕ ಎಂದು ಸಾಬೀತುಪಡಿಸಿದ್ದಾರೆ, ನಾವೆಲ್ಲರೂ ಅವರನ್ನು ಬಯಸುತ್ತೇವೆ, ನಮ್ಮ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.



Join Whatsapp