ಭಾರಿ ಬಿಸಿಲಿಗೆ ಉತ್ತರ ಭಾರತ ತತ್ತರ: ಜೂನ್ 8ರವರೆಗೆ ಶಾಲೆಗಳಿಗೆ ರಜೆ ನೀಡಿದ ಬಿಹಾರ

Prasthutha|

ನವದೆಹಲಿ: ಬಿಸಿಲಿನ ತಾಪ, ಬಿಸಿಗಾಳಿಯಿಂದ ಉತ್ತರ ಭಾರತದ ಜನ ತತ್ತರಿಸಿ ಹೋಗಿದ್ದು, ಬಿಸಿಲಿನ ತಾಪಮಾನ ಹೆಚ್ಚಳದ ಕಾರಣಕ್ಕೆ ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೂನ್ 8ರವರೆಗೂ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿದೆ.

- Advertisement -

ಬಿಹಾರದ ವ್ಯಕ್ತಿಯೊಬ್ಬರು ಹೀಟ್‌ಸ್ಟ್ರೋಕ್‌ನಿಂದ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶಾಖಾಘಾತದಿಂದ ವ್ಯಕ್ತಿಯನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಹಾರದಲ್ಲಿ ಹೀಟ್ಸ್ಟ್ರೋಕ್ನಿಂದ ಒಟ್ಟು 19 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಭಾರತದ ಹಲವು ಕಡೆ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಹೆಚ್ಚು ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

- Advertisement -

ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಗುಜರಾತ್, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳ ಹಲವು ಕಡೆಗಳಲ್ಲಿ ತಾಪಮಾನ ಏರಿಕೆ ಕಂಡಿದೆ, ಉತ್ತರ ಭಾರತದ ಅನೇಕ ಕಡೆ 52 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗಿದೆ.



Join Whatsapp