ಯುವ ಕವಿ ಲಕ್ಕೂರು ಆನಂದ ಅನುಮಾನಾಸ್ಪದ ಸಾವು

Prasthutha|

ಕಲಬುರಗಿ: ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಕೂರು ಆನಂದ ಅವರು ನಿಧನ ಹೊಂದಿದ್ದಾರೆ.

- Advertisement -


ಕಲಬುರಗಿಯ ಕಡಗಂಚಿ ಬಳಿ ಇರುವ ಕೇಂದ್ರಿಯ ವಿವಿ ಪಿಎಚ್ ಡಿ ವಿದ್ಯಾರ್ಥಿಯಾಗಿದ್ದ ಆನಂದ್ ಶವ ವಿಶ್ವವಿದ್ಯಾಲಯ ರಸ್ತೆ ಬದಿಯ ಕಟ್ಟೆ ಮೇಲೆ ಪತ್ತೆಯಾಗಿದೆ. ಹೀಗಾಗಿ ನರೋಣಾ ಠಾಣೆ ಪೊಲೀಸರು ಇದೊಂದು ಅನುಮಾನಾಸ್ಪದ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 44 ವರ್ಷ ಪ್ರಾಯದ ಲಕ್ಕೂರು ಸಿ. ಆನಂದ ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಆಗಿದ್ದರು.



Join Whatsapp