ವಿಜಯಪುರ: ತಲೆ ಮೇಲೆ ಕಲ್ಲು ಹಾಕಿ ಯುವಕನ ಹತ್ಯೆ

Prasthutha|

ವಿಜಯಪುರ: ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಷ್ಟಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆ ಬಳಿ ನಡೆದಿದೆ.

- Advertisement -

ರೋಹಿತ್ ವಸಂತ್ ಪವಾರ್ (23) ಕೊಲೆಯಾದ ಯುವಕ. ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್​ನನ್ನು ದುಷ್ಕರ್ಮಿಗಳು​​ ಕೊಲೆಗೈದು ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಯರ್​​​ ಬಾಟಲ್​ ಹಾಗೂ​ ಚಿಪ್ಸ್​ ಪ್ಯಾಕೆಟ್​ ಪತ್ತೆಯಾಗಿದೆ. ಮೃತನ ಪರಿಚಯಸ್ಥರಿಂದಲೇ ಕೊಲೆ ನಡೆದಿರುವ ಶಂಕೆಯನ್ನು ಮೃತನ ಕುಟುಂಬ ಆರೋಪಿಸಿದೆ.

ಮೇಲ್ನೋಟಕ್ಕೆ ಇದು ಯುವಕನ ಪರಿಚಯಸ್ಥರಿಂದಲೇ ಈ ಒಂದು ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.



Join Whatsapp