ರಾಮನಗರದ ಕೊಡುಗೆ ವಿಚಾರವಾಗಿ ಹೆಚ್‌ಡಿಕೆಗೆ ಡಿಕೆಶಿ ಪಂಥಾಹ್ವಾನ

Prasthutha|

ರಾಮನಗರದ ಕೊಡುಗೆ ವಿಚಾರವಾಗಿ ಮಾಜಿ ಸಿಎಂ ಹೆಚ್‌ಡಿಕೆಗೆ ಡಿಸಿಎಂ ಡಿಕೆ ಶಿಮಕುಮಾರ್ ಪಂಥಾಹ್ವಾನ ನೀಡಿದ್ದಾರೆ.

- Advertisement -

ಚದರಕ್ಕೆ 100 ರೂಪಾಯಿ ಫಿಕ್ಸ್ ಮಾಡಿಕೊಂಡು ಹಗಲು ದರೋಡೆ ಮಾಡ್ಕೊಂಡು ಓಡಾಡುತ್ತಿದ್ದಿರಲ್ಲ? ರಾಮನಗರಕ್ಕೆ ನಿಮ್ಮ ಕೊಡುಗೆ ಏನು ಅಂತ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರನ್ನು ಎಚ್‌ಡಿಕೆ ಪ್ರಶ್ನಿಸಿದ್ದರು.

ರಾಮನಗರಕ್ಕೆ ಕೊಡುಗೆ ಏನು ಎಂಬ ಸವಾಲಿಗೆ ಉತ್ತರಿಸೋದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಮನಗರಕ್ಕೆ ನಾನು ನೀಡಿರುವ ಕೊಡುಗೆಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ಡಿಕೆಶಿ ಪಂಥಾಹ್ವಾನ ನೀಡಿದ್ದಾರೆ.

- Advertisement -

ಎಲ್ಲಿ‌ಬೇಕಾದ್ರೂ ಫಿಕ್ಸ್ ಮಾಡಿ, ಒಂದೆರೆಡು ದಿನ ಸಮಯ ಕೊಡಿ ಎಂದು ಡಿಕೆಶಿ ಹೇಳಿದ್ದಾರೆ. ಒಂದೆರಡು ದಿನದ ಬಳಿಕ ಸಮಯ ಫಿಕ್ಸ್ ಮಾಡಿ, ನಾನು ಬಹಿರಂಗ ಚರ್ಚೆಗೆ ಸಿದ್ಧ. ನೀವೇ ಮಾಧ್ಯಮದವರು ಟೈಮ್ ಫಿಕ್ಸ್ ಮಾಡಿ ಎಂದಿದ್ದಾರೆ. ಈ ಮೂಲಕ ಹೆಚ್‌ಡಿಕೆಗೆ ಬಹಿರಂಗ ಚರ್ಚೆಗೆ ಆಗಮಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.



Join Whatsapp