ಬೆಂಗಳೂರಿನಿಂದ ರಾಹುಲ್ ಗಾಂಧಿ, ಎಸ್‌ಎಂ ಕೃಷ್ಣ ನಾಮಪತ್ರ: ಮಂಡ್ಯದಿಂದ ಹೆಚ್‌ಡಿ ರೇವಣ್ಣ ಸ್ಪರ್ಧೆ!

Prasthutha|

ಗಳೂರು: ಮೊದಲ ಹಂತದಲ್ಲಿ ಮತ ದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಅಖಾಡ ಬಹುತೇಕ ಸಿದ್ಧಗೊಂಡಿದೆ.ಈವರೆಗೆ ಒಟ್ಟು 333 ಪುರುಷರು ಹಾಗೂ 25 ಮಹಿಳಾ ಅಭ್ಯರ್ಥಿಗಳ ಸಹಿತ 358 ಹುರಿಯಾಳುಗಳು ಸೇರಿ ಒಟ್ಟು 492 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರ ಹೆಸರು ಇರುವ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಗಮನ ಸೆಳೆದಿದ್ದಾರೆ.

- Advertisement -

ಮಂಡ್ಯದಲ್ಲಿ ಎಚ್‌.ಡಿ. ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಪೂರ್ವಾಂಚಲ್‌ ಮಹಾಪಂಚಾಯತ್‌ ಎನ್ನುವ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ರಾಹುಲ್‌ ಗಾಂಧಿ ಎನ್‌. ಹಾಗೂ ಎಸ್‌.ಎಂ. ಕೃಷ್ಣ ಹೆಸರಿನ ಪಕ್ಷೇತರ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಡಾ| ಸಿ.ಎನ್‌. ಮಂಜುನಾಥ್‌ ಎದುರು ಮಂಜುನಾಥ್‌ ಕೆ., ಮಂಜುನಾಥ್‌ ಎನ್‌., ಮಂಜುನಾಥ್‌ ಸಿ., ಬಿಎಸ್‌ಪಿಯಿಂದ ಮಂಜುನಾಥ ಸಿ.ಎನ್‌. ಎಂಬ ಒಂದೇ ಹೆಸರಿನ ಹಲವರು ಉಮೇದುವಾರಿಕೆ ಸಲ್ಲಿಸಿದ್ದಾರೆ.



Join Whatsapp