ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲಾಗದ ಕುಮಾರಸ್ವಾಮಿ: ಡಿಕೆಶಿ

Prasthutha|

ಕೋಲಾರ: ಕುಮಾರಸ್ವಾಮಿಯವರಿಗೆ ಒಂದು ಸ್ವಕ್ಷೇತ್ರ ಎಂಬುದಿಲ್ಲ. ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲಾಗಲು ಅವರಿಂದಾಗಲಿಲ್ಲ. ಆದ್ದರಿಂದ ಕ್ಷೇತ್ರಗಳನ್ನು ಬದಲಾಯಿಸುತ್ತಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟೀಕಿಸಿದಾರೆ.

- Advertisement -

ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ನಾಮಪತ್ರ ಸಲ್ಲಿಕೆ ಮುನ್ನ ನಗರದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವಕಾಶವಾದಿ. ಜೆಡಿಎಸ್‌ನ ತೆನೆ ಬಿಸಾಕಿ ರಾಮನಗರದಲ್ಲಿ ತಮ್ಮ ಬಾಮೈದ ಡಾ| ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದಾರೆ. ಟೂರಿಂಗ್‌ ಟಾಕೀಸ್‌ನಂತೆ ಕ್ಷೇತ್ರ ಬದಲಿಸುತ್ತಾ, ಈಗ ಮಂಡ್ಯದಲ್ಲಿ ನಿಲ್ಲುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.



Join Whatsapp