ಚಿಕ್ಕಬಳ್ಳಾಪುರಕ್ಕೆ ಒಬ್ಬ ಹುಚ್ಚ ವೆಂಕಟ್ ಬಂದಿದ್ದಾನೆ: ಕೋಲಾರ ಸಂಸದ ಮುನಿಸ್ವಾಮಿ

Prasthutha|

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ಒಬ್ಬ ಹುಚ್ಚ ವೆಂಕಟ್ ಬಂದಿದ್ದಾನೆ ಎಂದು ಕೋಲಾರ ಸಂಸದ ಮುನಿಸ್ವಾಮಿ, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ವ್ಯಂಗ್ಯವಾಡಿದ್ದಾರೆ.

- Advertisement -

ಕೆ. ಸುಧಾಕರ್ ಪರ ಕೋಲಾರ ಸಂಸದ ಮುನಿಸ್ವಾಮಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಪ್ರಮುಖ ನಾಯಕರು ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ಒಬ್ಬ ಹುಚ್ಚ ವೆಂಕಟ್ ಬಂದಿದ್ದಾನೆ. ರಾತ್ರಿ ಸಿನಿಮಾ ನೋಡಿಕೊಂಡು ಬೆಳಗ್ಗೆ ಡೈಲಾಗ್ ಹೊಡಿತೀಯಾ ಎಂದು ವ್ಯಂಗ್ಯವಾಡಿದ್ದಾರೆ.

ರಾತ್ರಿ ಸಿನಿಮಾ ನೋಡಿಕೊಂಡು ಬೆಳಗ್ಗೆ ಡೈಲಾಗ್ ಹೊಡಿತಿಯಾ, ಅವೆಲ್ಲಾ ಈಗ ನಡೆಯಲ್ಲ. ಜನ ಮತ್ತೆ ನಂಬಲ್ಲ. ನಿನಗೆ ತಾಕತ್ ಇದ್ರೆ ಡಾ. ಕೆ ಸುಧಾಕರ್ ಮಂತ್ರಿ ಆಗುವುದನ್ನು ತಡೆಯು ನೋಡೋಣ ಎಂದು ಪರೋಕ್ಷವಾಗಿ ಪ್ರದೀಪ್ ಈಶ್ವರ್‌ಗೆ ಸವಾಲು ಹಾಕಿದ್ದಾರೆ.



Join Whatsapp