ಪಬ್‌ ಮುಂದಿನ ಚರಂಡಿಯಲ್ಲಿ ವ್ಯಕ್ತಿಯ ಚಿತಾಭಸ್ಮ ವಿಸರ್ಜನೆ.! ಈ ವಿಚಿತ್ರ ಕ್ರಿಯೆಗೆ ಕಾರಣವೇನು ಗೊತ್ತಾ?

Prasthutha|

ತಮ್ಮ ತಂದೆಯ ಕೊನೆಯ ಆಸೆಯಂತೆ ಕುಟುಂಬವೊಂದು ಆತನ ಚಿತಾಭಸ್ಮವನ್ನ ಅವರ ನೆಚ್ಚಿನ ಪಬ್​ನ ಎದುರಿದ್ದ ಚರಂಡಿಯಲ್ಲಿ ವಿಸರ್ಜಿಸಿದೆ. ತಾನು ಶಾಶ್ವತವಾಗಿ ನೆಚ್ಚಿನ ಪಬ್​ ಬಳಿಯಲ್ಲೇ ಇರಬೇಕು ಎಂದು ತಂದೆ ಆಸೆಪಟ್ಟಿದ್ದರಿಂದ ಅವರು ಹೇಳಿದಂತೆಯೇ ಕುಟುಂಬಸ್ಥರು ಚಿತಾಭಸ್ಮವನ್ನ ವಿಸರ್ಜಿಸಿದ್ದಾರೆ.

- Advertisement -

ಕೆವಿನ್​ ಎಂಬವರು ತಾವು ಸಾವಿಗೀಡಾಗುವ ಮುನ್ನ ಕುಟುಂಬಸ್ಥರ ಎದುರು ಇಂತಹದ್ದೊಂದು ವಿಚಿತ್ರ ಬೇಡಿಕೆಯನ್ನು ಇಟ್ಟಿದ್ದರು. ಪುತ್ರ ಓವೆನ್​ ಹಾಗೂ ಪುತ್ರಿ ಕ್ಯಾಸಿಡಿ ಬಳಿ ತಮ್ಮ ಕೊನೆಯ ಆಸೆಯನ್ನ ಹೇಳಿಕೊಂಡಿದ್ದ ಕೆವಿನ್​ 66ನೇ ವಯಸ್ಸಿಗೆ ನಿಧನರಾಗಿದ್ದರು.

ಹೀಗಾಗಿ ಕೆವಿನ್​​ ಪುತ್ರ ಅವ​ರ ಆಸೆಯಂತೆಯೇ ಅವರ ಚಿತಾಭಸ್ಮವನ್ನ ಬಿಯರ್​ ನಲ್ಲಿ ಬೆರೆಸಿದ್ದಾರೆ. 

- Advertisement -

 “ನಿಮಗೆ ಇದು ತೀರಾ ವಿಚಿತ್ರ ಎಂದೆನಿಸಬಹುದು. ಆದರೆ ನನ್ನ ತಂದೆಯ ಕೊನೆ ಆಸೆ ಹೀಗೆ ಇತ್ತು. ಅವರು ಈ ಸ್ಥಳದಲ್ಲಿ ಶಾಶ್ವತವಾಗಿ ಇರಲು ಬಯಸಿದ್ದರು” ಎಂದು ತಂದೆಯ ಅಂತಿಮ ಕಾರ್ಯ ಮಾಡುವ ಮುನ್ನ ಮಾತನಾಡಿದ ಓವೆನ್ ಹೇಳಿದ್ದಾರೆ. ಬಳಿಕ ಚಿತಾಭಸ್ಮ ತುಂಬಿದ್ದ ಬಿಯರ್​ನ್ನು ಓವೆನ್​ ಚರಂಡಿಯಲ್ಲಿ ಚೆಲ್ಲಿದ್ದಾರೆ.

Join Whatsapp