ಕಪ್ಪು ಬಾವುಟ ಪ್ರದರ್ಶನ: SFI ಕಾರ್ಯಕರ್ತರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕೇರಳ ರಾಜ್ಯಪಾಲ

Prasthutha|

ಕೊಲ್ಲಂ: ತಮ್ಮ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಎಸ್ ಎಫ್ ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಾರಿನಿಂದ ಇಳಿದು ಪ್ರತಿಭಟನೆ ನಡೆಸಿದರು.

- Advertisement -


ಕೊಟ್ಟಾರಕ್ಕದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ರಾಜ್ಯಪಾಲರಿಗೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ‘ಸ್ಟೊಡೆಂಟ್ ಫೆಡೆರೇಷನ್ ಆಫ್ ಇಂಡಿಯಾ’ದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದರು.


ಕೊಲ್ಲಂನ ಎಂ.ಸಿ.ರಸ್ತೆಯ ಅಂಗಡಿಯೊಂದರಿಂದ ಕುರ್ಚಿ ತೆಗೆದುಕೊಂಡು ಬಂದ ಆರಿಫ್ ಖಾನ್, ರಸ್ತೆ ಬದಿಯಲ್ಲಿ ಕುಳಿತು ಧರಣಿ ನಡೆಸಿದ್ದಾರೆ.

- Advertisement -



Join Whatsapp