ಕಲಬುರಗಿ: ವಕೀಲನ ಬರ್ಬರ ಹತ್ಯೆ

Prasthutha|

ಕಲಬುರಗಿ: ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಸಾಯಿ ಮಂದಿರ ಬಳಿಯಿರುವ ಅಪಾರ್ಟ್ಮೆಂಟ್ ಬಳಿ ನಡೆದಿದೆ.

- Advertisement -

ಹತ್ಯೆಗೀಡಾದ ವಕೀಲನನ್ನು ಈರಣ್ಣಗೌಡ ಪಾಟೀಲ (40) ಎಂದು ಗುರುತಿಸಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈರಣ್ಣಗೌಡ ಬೈಕ್ ನಲ್ಲಿ ಕೋರ್ಟ್ ಗೆ ಹೋಗುವ ವೇಳೆ ಇಬ್ಬರ ದುಷ್ಕರ್ಮಿಗಳು ಅಡ್ಡಿಗಟ್ಟಿದ್ದಾರೆ.

ಬಳಿಕ ಈರಣ್ಣ ಅವರು ಬೈಕ್ ಬಿಟ್ಟು ವಾಪಸ್ ತಮ್ಮ ಅಪಾಟ್೯ ಮೆಂಟ್ ಕಡೆ ಓಡಿದ್ದಾರೆ. ಅಲ್ಲದೇ ಇನ್ನೇನು ಜೇಬಿನಲ್ಲಿದ್ದ ಗನ್ ತೆಗೆಯುವಷ್ಟರಲ್ಲೇ ಹಂತಕರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಾಸ್ಕ್ ಧರಿಸಿದ್ದ ಇಬ್ಬರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಈರಣ್ಣನ ಅರ್ಪಾಟ್ ಮೆಂಟ್ ನಲೇ ಹತ್ಯೆ ಮಾಡಿದ್ದಾರೆ.



Join Whatsapp