ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ

Prasthutha|

ನವದೆಹಲಿ : ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಗಿದೆ. ರಾಷ್ಟ್ರಪತಿ ಭವನದಿಂದ ಮಂಗಳವಾರ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ, ಕಿರಣ್ ಬೇಡಿ ಅವರ ಸ್ಥಾನವನ್ನು ಹಿಂಪಡೆಯುವ ಬಗ್ಗೆ ಆದೇಶಿಸಲಾಗಿದೆ.

- Advertisement -

ತೆಲಂಗಾಣದ ರಾಜ್ಯಪಾಲರಾದ ಡಾ. ತಮಿಳ್ ಸಾಯಿ ಅವರಿಗೆ ಹೆಚ್ಚುವರಿಯಾಗಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆ ವಹಿಸಲಾಗಿದೆ. 2016ರಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಕಿರಣ್ ಬೇಡಿ ನೇಮಕವಾಗಿದ್ದರು. ತಮ್ಮ ಖಡಕ್ ನೀತಿಗಳಿಂದ ಅವರು ಗಮನ ಸೆಳೆದಿದ್ದರಾದರೂ, ಮುಖ್ಯಮಂತ್ರಿ ನಾರಾಯಣಸ್ವಾಮಿ ಜೊತೆಗೆ ಸಂಘರ್ಷ ಹೊಂದಿದ್ದರು.

ಕಿರಣ್ ಬೇಡಿ ಅವರನ್ನು ವಜಾ ಮಾಡುವಂತೆ ನಾರಾಯಣಸ್ವಾಮಿ ಪಟ್ಟು ಹಿಡಿದಿದ್ದರು. ಅಂದಹಾಗೇ, ನಾರಾಯಣಸ್ವಾಮಿ ನೇತೃತ್ವದ ಪುದುಚೇರಿಯ ಕಾಂಗ್ರೆಸ್-ಡಿಎಂಕೆ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ. ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದರು ಸರಕಾರ ಅಲ್ಪಮತಕ್ಕೆ ಕುಸಿದಿದೆ.

Join Whatsapp