ಗಂಟಲಲ್ಲಿ ಚಕ್ಕುಲಿ ತುಂಡು ಸಿಲುಕಿ ಒಂದೂವರೆ ವರ್ಷದ ಮಗು ಮೃತ್ಯು

Prasthutha|

ತಿರುವನಂತಪುರಂ: ಹೆತ್ತವರು ಪ್ರೀತಿಯಿಂದ ನೀಡಿದ ಆಹಾರವೇ ಕರುಳ ಕುಡಿಯನ್ನು ಶಾಸ್ವತ ಕಳಕೊಳ್ಳುವಂತೆ ಮಾಡಿದ ದಾರುಣ ಘಟನೆ ನಡೆದಿದೆ. ಚಕ್ಕುಲಿ ತುಂಡುಗಳಲ್ಲಿ ಒಂದನ್ನು ತೆಗೆದು ಬಾಯಿಗೆ ಹಾಕಿ ತಿನ್ನಲು‌ ನೋಡಿದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಆ ಚಕ್ಕುಲಿ ತುಂಡು ಸಿಲುಕಿಕೊಂಡು ಕೊನೆಯುಸಿರೆಳೆದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

- Advertisement -

ಮೃತ ಮಗು ಹೆದರು ವೈಷ್ಣವ್. ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ಹೌಸ್‌ನ ವಿಜೀಶ್ ಮತ್ತು ದಿವ್ಯಾ ದಾಸ್ ಅವರ ಅವಳಿ ಮಕ್ಕಳಲ್ಲಿ ಒಬ್ಬನು.

ಘಟನೆ ಸಂದರ್ಭದಲ್ಲಿ ಮಗು ಹಾಗೂ ತಾಯಿ ದಿವ್ಯಾ ಮಾತ್ರ ಮನೆಯಲ್ಲಿದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟ‌ರ್ ಆಗಿದ್ದು, ಪಾಲಕ್ಕಾಡ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆ ತೆರಳಿದ್ದರು.

- Advertisement -

ಮಗು ಚಕ್ಕುಲಿ ತುಂಡುಗಳನ್ನು ತಿನ್ನುತ್ತಾ ತನ್ನ ಪಾಡಿಗೆ ಆಟವಾಡುತ್ತಿತ್ತು. ಈ ವೇಳೆ ಚಕ್ಕುಲಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಮಗು ಉಸಿರಾಡಲು ಕಷ್ಟಪಟ್ಟಿದೆ‌. ಕೂಡಲೇ ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ವೈಷ್ಣವ್‌ನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಹೆತ್ತವರು ಪುಟ್ಟ ಮಕ್ಕಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಕಾಪಾಡಬೇಕಿದೆ ಎಂಬ ಸಂದೇಶ ಇಂತಹ ಘಟನೆಗಳಿಂದ ಪಡೆಯಬಹುದಾಗಿದೆ.



Join Whatsapp