ಭಾರತದಿಂದ ಸೌದಿಗೆ ನೇರ ವಿಮಾನಕ್ಕೆ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಆಗ್ರಹ

Prasthutha|

ಕೋಯಿಕ್ಕೋಡ್ : ಭಾರತದಿಂದ ಸೌದಿಗೆ ನೇರ ವಿಮಾನದ ಅಗತ್ಯತೆಯ ಬಗ್ಗೆ ಮಧ್ಯಸ್ಥಿಕೆ ವಹಿಸಬೇಕೆಂದು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.

- Advertisement -

ಈ ಸಂಬಂಧ ಅವರು ಸಿಎಂ ಪಿಣರಾಯಿ ವಿಜಯನ್ ಜೊತೆ ಚರ್ಚಿಸಿ, ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಔಸಾಫ್ ಸಈದ್ ಮತ್ತು ಭಾರತೀಯ ಸೌದಿ ರಾಯಭಾರಿ ಮುಹಮ್ಮದ್ ಅವರಿಗೆ ಪತ್ರ ಬರೆದಿದ್ದಾರೆ.

ಸೌದಿ ಅರೇಬಿಯಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಲಸಿಗರಾಗಿರುವ ಅನಿವಾಸಿ  ಭಾರತೀಯರಿಗೆ ವಿಮಾನ ನಿಷೇಧ ಕಾರಣ ತುಂಬಾ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. ಪರಿಣಾಮವಾಗಿ ಕೆಲಸಕ್ಕಾಗಿ ಸೌದಿಗೆ ತೆರಳುವ ಮತ್ತು ವಿದೇಶದಿಂದ ಮರಳುವ ಕಾರ್ಮಿಕರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಇಂತಹ ವಿಮಾನ ನಿಷೇಧದಿಂದಾಗಿ ಬಹಳಷ್ಟು ವಲಸಿಗರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮಾತ್ರವಲ್ಲದೆ, ಕೆಲವರು ವೀಸಾ ಅವಧಿ ಮುಗಿಯುವ ಆತಂಕದಲ್ಲಿದ್ದಾರೆ. ಇಂತಹ ಬಿಕ್ಕಟ್ಟಿನಿಂದ ವಲಸಿಗರನ್ನು ರಕ್ಷಿಸಿ ಕೋವಿಡ್ ನೆಗೆಟಿವ್ ಹೊಂದಿದವರನ್ನು ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕೆಂದು ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಒತ್ತಾಯಿಸಿದ್ದಾರೆ.



Join Whatsapp