ಶಿವಸೇನಾ ಕಾರ್ಯಕರ್ತರಿಂದ ಬಿಜೆಪಿ ನಾಯಕನ ಮೇಲೆ ಮಸಿ

Prasthutha|

- Advertisement -

ಸೋಲಾಪುರ: ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಬಿಜೆಪಿ ಮುಖಂಡನನ್ನು ಮಸಿಯಿಂದ ಸ್ನಾನ ಮಾಡಿಸಿ ಸೀರೆ ಉಡಿಸಿದ್ದಾರೆ. ಈ ಘಟನೆ ಸೋಲಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ನಾಯಕನ ಮೇಲೆ ದಾಳಿ ನಡೆಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 17 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರನ್ನೂ ಬಂಧಿಸಲಾಗಿದೆ ಎಂದು ಸೋಲಾಪುರ ಪೊಲೀಸರು ತಿಳಿಸಿದ್ದಾರೆ.

ಶಿವಸೇನೆ ಕಾರ್ಯಕರ್ತರು ಬಿಜೆಪಿ ನಾಯಕ ಶಿರೀಶ್ ಕಟೆಕ್ಕರ್ ಅವರನ್ನು ಹಿಡಿದು ತಲೆಗೆ ಮಸಿಯನ್ನು ಸುರಿದಿದ್ದಾರೆ. ನಂತರ ಅವರನ್ನು ಬೀದಿಯಲ್ಲಿ ನಡೆದಾಡಿಸಿ ನೀಲಿ ಸೀರೆ ಧರಿಸುವುದು ವೀಡಿಯೊದಲ್ಲಿದೆ. ಉದ್ಧವ್ ಠಾಕ್ರೆ ಅವರನ್ನು ಟೀಕಿಸಿದ್ದಕ್ಕಾಗಿ ಕಟೆಕ್ಕರ್ ಅವರಿಗೆ ಮಸಿಯಿಂದ ಅಭಿಷೇಕ ಮಾಡಲಾಗಿದೆ ಎಂದು ಶಿವಸೇನೆ ಕಾರ್ಯಕರ್ತ ಪುರುಷೋತ್ತಮ್ ಬರ್ಡೆ ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ. ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದ್ದಾರೆ.

- Advertisement -

 ಶಿವಸೇನೆ ಕಾರ್ಯಕರ್ತರು ಈ ಹಿಂದೆಯೂ ಉದ್ಧವ್ ಠಾಕ್ರೆ ಅವರ ಟೀಕಾಕಾರರ ಮೇಲೆ ದಾಳಿ ನಡೆಸಿದ್ದರು. ಠಾಕ್ರೆ ಅವರನ್ನು ಅಪಹಾಸ್ಯ ಮಾಡುವ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಕಳೆದ ವರ್ಷ ಆರು ಶಿವಸೇನೆ ಕಾರ್ಯಕರ್ತರು ಮಾಜಿ ನೌಕಾಸೇನೆಯ ಅಧಿಕಾರಿ ಮದನ್ ಶರ್ಮಾ ಅವರಿಗೆ ಥಳಿಸಿದ್ದರು. ಘಟನೆಯ ನಂತರ ಆರು ಜನರನ್ನು ಬಂಧಿಸಲಾಗಿತ್ತು. ಇದರ ನಂತರ ಮದನ್ ಶರ್ಮಾ ಅವರು ಬಿಜೆಪಿಗೆ ಸೇರುವುದಾಗಿ ಸ್ಪಷ್ಟಪಡಿಸಿದ್ದರು.

Join Whatsapp