ಭಾರತ್ ಜೋಡೋ ಯಾತ್ರೆ: ರಾಮನಗದಲ್ಲಿ ಸಿಎಂ-ಡಿಸಿಎಂ ಪಾದಯಾತ್ರೆ

Prasthutha|

ರಾಮನಗರ : ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಯಾತ್ರೆಯಲ್ಲಿ ಭಾಗವಹಿಸಿದ್ದರು .

- Advertisement -

ರಾಮನಗರ ಜಿಲ್ಲಾಧಿಕಾರಿ ಕಚೇರಿಯಿಂದ ಯಾತ್ರೆ ಆರಂಭಗೊಂಡು, ಹಳೆ ಬೆಂಗಳೂರು ಮೈಸೂರು ಹೆದ್ದಾರಿಯ ಮೂಲಕ ಸುಮಾರು 3 ಕಿ. ಮೀ ಹೆದ್ದಾರಿಯಲ್ಲಿ ಸಂಚರಿಸಲಾಯಿತು. ಸಮಯಾವಕಾಶ ಕೊರತೆ ಹಿನ್ನಲೆ ಹಾಗೂ ಮಳೆಯ ಮುನ್ಸೂಚನೆ ಹಿನ್ನೆಲೆ ಪಾದಯಾತ್ರೆ ಬದಲು ರೋಡ್ ಶೋ ನಡೆಸಲಾಯಿತು.



Join Whatsapp