ತೊಕ್ಕೊಟ್ಟಿನಲ್ಲಿರುವ ಇಂದಿರಾ ಕ್ಯಾಂಟೀನ್’ಗೆ ಸಚಿವ ರಹೀಂ ಖಾನ್ ದಿಢೀರ್ ಭೇಟಿ

Prasthutha|

ಮಂಗಳೂರು: ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಸೆ.6ರ ಬುಧವಾರ ತೊಕ್ಕೊಟಿನಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿದರು.

- Advertisement -


ಇದೇ ಸಂದರ್ಭದಲ್ಲಿ ಕ್ಯಾಂಟಿನ್ ನ ಮೂಲ ಸೌಕರ್ಯಗಳು , ಸ್ವಚ್ಛತೆ , ಆಹಾರದ ಪ್ರಮಾಣ, ಗುಣಮಟ್ಟ ಹಾಗೂ ಶುಲ್ಕದ ರಶೀದಿ ಸೇರಿದಂತೆ ಮತ್ತಿತರ ಸೌಲಭ್ಯ ಹಾಗೂ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ, ಅವುಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.


ನಂತರ ಕ್ಯಾಂಟೀನ್ ವ್ಯಾಪ್ತಿಯ ಸ್ಥಳೀಯ ಫಲಾನುಭವಿಗಳ ಜೊತೆಗೆ ಚರ್ಚಿಸಿ ಆಹಾರ ವಿತರಣೆ ನಡೆಯುತ್ತಿರುವ ಬಗ್ಗೆ ಹಾಗೂ ನ್ಯೂನ್ಯತೆಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಅವುಗಳನ್ನು ಸರಿಪಡಿಸಲು ಸೂಚಿಸಿದರು.

- Advertisement -


ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಭಿಷೇಕ್ ವಿ.ಎಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



Join Whatsapp