ಜಿಂದ್ ನಲ್ಲಿ ರೈತರ ಮಹಾಪಂಚಾಯತ್ | ರಾಕೇಶ್ ಟಿಕಾಯತ್ ಸೇರಿದಂತೆ ಮುಖಂಡರಿದ್ದ ವೇದಿಕೆ ಕುಸಿತ

Prasthutha|

ಜಿಂದ್ : ಹರ್ಯಾಣದ ಜಿಂದ್ ನಲ್ಲಿ ಇಂದು ರೈತರು ನಡೆಸಿದ ಬೃಹತ್ ‘ಮಹಾಪಂಚಾಯತ್’ನ ವೇದಿಕೆ ಕುಸಿದುಬಿದ್ದ ಘಟನೆ ನಡೆದಿದೆ. ಭಾರತೀಯ ಕಿಸಾನ್ ಯೂನಿಯನ್ ನ ನಾಯಕ ರಾಕೇಶ್ ಟಿಕಾಯತ್ ಸೇರಿದಂತೆ ಹಲವು ರೈತ ನಾಯಕರು ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

- Advertisement -

ಹರ್ಯಾಣ ಖಾಪ್ ಒಕ್ಕೂಟ ಮಹಾಪಂಚಾಯತ್ ಆಯೋಜಿಸಿತ್ತು. ಭಾರೀ ಸಂಖ್ಯೆಯ ಜನರು ನೆರೆದಿದ್ದರು. ರಾಕೇಶ್ ಟಿಕಾಯತ್ ಸೇರಿದಂತೆ ವಿವಿಧ ರೈತ ಮುಖಂಡರು ಜನರನ್ನುದ್ದೇಶಿಸಿ ಮಾತನಾಡಿದರು.

ಘಟನೆ ಬಗ್ಗೆ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದು, ಜಿಂದ್ ರೈತ ಮಹಾಪಂಚಾಯತ್ ನಲ್ಲಿ ವೇದಿಕೆ ಕುಸಿಯುವಷ್ಟು ದಾಖಲೆಯ ಜನ ಸೇರಿದ್ದರು, 2021ರ ಇತಿಹಾಸ ಯುವಕರ ಕ್ರಾಂತಿಗಾಗಿ ನೆನಪಿಸಲ್ಪಡುತ್ತದೆ. ಹೆದರಬೇಡಿ, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.  

Join Whatsapp