ಪ್ರತ್ಯೇಕ ಘಟನೆ: ವಿದ್ಯಾರ್ಥಿ ಆತ್ಮಹತ್ಯೆ, ಹಾರಂಗಿ ನಾಲೆಗೆ ಏಡಿ ಹಿಡಿಯಲು ಹೋದ ಬಾಲಕ ಕಣ್ಮರೆ

Prasthutha|

ಚಿಕ್ಕಮಗಳೂರು: ಒಂಬತ್ತನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ.

- Advertisement -

ಶ್ರೀನಿವಾಸ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.


ಶಾಲೆಯ ಹಾಸ್ಟೆಲ್ ನಲ್ಲಿ ವಾಸವಾಗಿರುವ ಶ್ರೀನಿವಾಸ್ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾರಂಗಿ ನಾಲೆಗೆ ಬಿದ್ದ ಶಾಲಾ ಬಾಲಕ ಕಣ್ಮರೆ
ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಬ್ಯಾಡಗೊಟ್ಟದಲ್ಲಿರುವ ಹಾರಂಗಿ ನಾಲೆಗೆ ಬಿದ್ದು ಒಬ್ಬ ಬಾಲಕ ಕಣ್ಮರೆಯಾಗಿದ್ದಾನೆ. ಸದ್ಗುರು ಅಪ್ಪಯ್ಯ ಸ್ವಾಮಿ ಶಾಲೆಯ ಬಾಲಕ ಅನಿತ್ ನೀರುಪಾಲಾದವನು.
ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರ ಬಳಿ ಈ ಘಟನೆ ನಡೆದಿದೆ.



Join Whatsapp