ಕೇದಾರನಾಥ್ ನಲ್ಲಿ ಭಾರೀ ಮಳೆ: ಒಂದೇ ಕುಟುಂಬದ 7 ಜನ ಸೇರಿ 13 ಮಂದಿ ನಾಪತ್ತೆ

Prasthutha|

ಉತ್ತರಾಖಂಡ: ಕೇದಾರನಾಥ ಧಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 13 ಜನರು ನಾಪತ್ತೆಯಾಗಿದ್ದಾರೆ.

- Advertisement -


ಕೇದಾರನಾಥ ದೇವಸ್ಥಾನದ ಪ್ರಮುಖ ರಸ್ತೆಯಾದ ಗೌರಿಕುಂಡ್ ನಲ್ಲಿ ಈ ಘಟನೆ ನಡೆದಿದೆ.


ಹಠಾತ್ ಭೂಕುಸಿತದಿಂದ ಮೂರು ಸ್ಥಳೀಯ ಅಂಗಡಿಗಳು ನಾಶವಾಗಿವೆ. ಇದರಿಂದ ಅದರಲ್ಲಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಸೇರಿ ಒಟ್ಟು 13 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರು. ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೆ, ಭಾರೀ ಮಳೆಯಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸಂತ್ರಸ್ತರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ನೇಪಾಳ ಮೂಲದವರು ಎಂದು ಸ್ಥಳೀಯರು ಹೇಳಿದ್ದಾರೆ.



Join Whatsapp