ಕುಂದಾಪುರ: ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿಗೆ ಬಿದ್ದು ಮೃತ್ಯು

Prasthutha|

ಉಪ್ಪುಂದ: ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಮೀನುಗಾರ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಡಿಕಲ್‌ನಲ್ಲಿ ಸಂಭವಿಸಿದೆ.

- Advertisement -

ಉಪ್ಪುಂದ ಗ್ರಾ. ಪಂ. ವ್ಯಾಪ್ತಿಯ ಮಡಿಕಲ್‌ ಕೊಂಬಾಡಿ ಮನೆ ರಾಮದಾಸ (40) ಮೃತಪಟ್ಟವರು.

ಉದಯ ಎಂಬವರ ಜತೆ ರಾಮದಾಸ ಮಡಿಕಲ್‌ ಹೊಳೆಗೆ ಮೀನುಗಾರಿಕೆಗೆ ಹೋಗಿದ್ದು, ಬಲೆ ಹಾಕಿ ಮೀನುಗಾರಿಕೆ ಮಾಡುತ್ತಿರುವ ಸಮಯ ರಾಮದಾಸ ಬಲೆಯನ್ನು ಎಳೆಯುತ್ತಿರುವಾಗ ಆಕಸ್ಮಿಕವಾಗಿ ನೀರಿಗೆ ಕುಸಿದು ಬಿದ್ದಿದ್ದಾರೆ.

- Advertisement -

ತಕ್ಷಣ ಬೈಂದೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp