ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಲೋಪದೋಷ ಸರಿಪಡಿಸುವ ತನಕ ಟೋಲ್ ಸಂಗ್ರಹಿಸಬಾರದು: ಸಚಿವ ಚಲುವರಾಯಸ್ವಾಮಿ

Prasthutha|

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಲೋಪದೋಷ ಸರಿಪಡಿಸುವ ತನಕ ಟೋಲ್ ಸಂಗ್ರಹಿಸಬಾರದು ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

- Advertisement -

ಇಂದು ಮಂಡ್ಯ ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆಯಲ್ಲಿ ಶ್ರೀರಂಗಪಟ್ಟಣದ ಬಳಿ ಇರುವ ಲೋಪದೋಶಗಳನ್ನು ವಿವರಿಸಿದರು. ಆ ಭಾಗದಲ್ಲಿ ರೆಸ್ಟ್ ರೂಮಿಲ್ಲ, ಅಂಬ್ಯುಲೆನ್ಸ್ ಮತ್ತು ಕ್ರೇನ್ ಗಳ ವ್ಯವಸ್ಥೆ ಇಲ್ಲ. ಹೀಗೆ ಮೊದಲಾದ ಸಮಸ್ಯೆಗಳನ್ನು ಉಲ್ಲೇಖಿಸಿ ಅವುಗಳನ್ನು ಸರಿಪಡಿಸದ ಹೊರತು ಟೋಲ್ ಸಂಗ್ರಹಿಸುವಂತಿಲ್ಲ ಎಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಇವತ್ತು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆಯೆಂದು ಹೇಳಿದರು.

Join Whatsapp