ಬಿಜೆಪಿಗೆ ಬಹುಮತ ಬರದಿದ್ದರೆ ಜೆಡಿಎಸ್ ಜತೆ ಒಪ್ಪಂದ: ಎಂ.ಪಿ. ರೇಣುಕಾಚಾರ್ಯ

Prasthutha|

ದಾವಣಗೆರೆ: ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಜತೆ ಒಪ್ಪಂದ ಆಗಬಹುದು ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

- Advertisement -


ಜಿಲ್ಲೆಯ ಹೊನ್ನಾಳಿಯಲ್ಲಿರುವ ಅವರ ನಿವಾಸದಲ್ಲಿ ಎಕ್ಸಿಟ್ ಪೋಲ್ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿ ಬಂದರೆ ನಮ್ಮ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಇದುವರೆಗೂ ಒಳ ಒಪ್ಪಂದ ಆಗಿಲ್ಲ. ಅಂತಹ ಸಂದರ್ಭ ಒದಗಿ ಬಂದರೂ ಆಗಬಹುದು. ಫಲಿತಾಂಶ ಬಂದ ನಂತರ ನಿರ್ಧಾರ ಆಗುತ್ತದೆ. ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ಜತೆ ಕೈ ಜೋಡಿಸುವ ಇಂಗಿತವನ್ನು ಹೊನ್ನಾಳಿ ಶಾಸಕರು ವ್ಯಕ್ತಪಡಿಸಿದರು.



Join Whatsapp