ಸಂಘಪರಿವಾರದಿಂದ ಹತ್ಯೆಯಾದ ಇದ್ರೀಸ್ ನಿವಾಸಕ್ಕೆ ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ; ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ

Prasthutha|

ಮಂಡ್ಯ: ಜಾನುವಾರು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಪುನೀತ್ ಕೆರೆಹಳ್ಳಿ ಮತ್ತು ತಂಡದಿಂದ ಹತ್ಯೆಗೀಡಾದ ಇದ್ರೀಸ್ ಪಾಷಾ ಅವರ ನಿವಾಸಕ್ಕೆ ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ನೇತೃತ್ವದ ನಿಯೋಗ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿತು.

- Advertisement -


ಇದ್ರೀಸ್ ಅವರ ಸಹೋದರನೊಂದಿಗೆ ಮಾತುಕತೆ ನಡೆಸಿದ ಅಬ್ದುಲ್ ಮಜೀದ್, ಕುಟುಂಬದ ಪರವಾಗಿ ಪಕ್ಷ ದೃಢವಾಗಿ ನಿಲ್ಲಲಿದೆ. ಕುಟುಂಬ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಪಕ್ಷದ ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಇದ್ದರು.

- Advertisement -



Join Whatsapp