SDPI ಹಳೆಕೋಟೆ ಅಧ್ಯಕ್ಷರಾದ ರವೂಫ್ ನೇತೃತ್ವದಲ್ಲಿ ಅರ್ಹ 30 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ

Prasthutha|

ಉಳ್ಳಾಲ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ಹಳೆಕೋಟೆ ವಾರ್ಡ್ ಅಧ್ಯಕ್ಷರಾದ ರವೂಫ್ ಹಳೆಕೋಟೆಯವರ ನೇತೃತ್ವದಲ್ಲಿ ಅರ್ಹ ಬಡ ಕುಟುಂಬಗಳಿಗೆ ರಮಝಾನ್ ಪಡಿತರ ಕಿಟ್ ವಿತರಿಸಲಾಯಿತು.

- Advertisement -

ರವೂಫ್ ಹಳೆಕೋಟೆಯವರ ನೇತೃತ್ವದಲ್ಲಿ ಪ್ರತಿ ವರ್ಷವೂ ಫಾರೂಕ್ ಹಳೆಕೋಟೆಯವರ ಸಹಕಾರದೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಈ ವರ್ಷವೂ ಅರ್ಹ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಯಿತು.

ಕಳೆದ ಹಲವಾರು ವರ್ಷಗಳಿಂದ ರಮಝಾನ್‌ನಲ್ಲಿ ಮತ್ತು ಕೋವಿಡ್ ಸಂಕಷ್ಟ ಕಾಲದಲ್ಲಿ ಲಾಕ್‌ಡೌನ್‌ ನಡುವೆಯೂ ಪಡಿತರ ಕಿಟ್ ಒದಗಿಸುವಲ್ಲಿ ಸಕ್ರಿಯವಾಗಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದ ಇವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Join Whatsapp