ಬಿಹಾರಿಗಳ ಮೇಲೆ ಹಲ್ಲೆ ಸುಲಿಗೆ: 7 ಮಂದಿ ದರೋಡೆಕೋರರ ಬಂಧನ

Prasthutha|

ಬೆಂಗಳೂರು: ಸೋಲದೇವನಹಳ್ಳಿಯ ದೊಡ್ಡಬ್ಯಾಲದಕೆರೆ ಮುಖ್ಯರಸ್ತೆಯ ಅನನ್ಯ ಪಬ್ಲಿಕ್ ಸ್ಕೂಲ್ ಬಳಿಯ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಐವರ ಮುಖಕ್ಕೆ ಕಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆ ನಡೆಸಿ ಹಣ ದರೋಡೆ ಮಾಡಿ ಪರಾರಿಯಾಗಿದ್ದ 7 ಮಂದಿ ದರೋಡೆಕೋರರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -


ರಾಜಾಜಿನಗರದ ಮಂಜುನಾಥನಗರದ ಶಿವರಾಜ್ ಅಲಿಯಾಸ್ ಶಿವ(31), ವಿದ್ಯಾರಣ್ಯನಗರದ ಕಿಶಾನ್(33), ರಾಜಾಜಿನಗರದ ನಿತೇಶ್ಕುರಮಾರ್ ಪಿ.ಆರ್ ಅಲಿಯಾಸ್ ಲೊಡ್ಡೆ(31), ಹೊರಮಾವುವಿನ ಸಾಗರ್ ಎಸ್ ಅಲಿಯಾಸ್ ಶಾಗಿ(27), ಹೆಬ್ಬಾಳದ ಮನು ಜಂಗಮ್ ಅಲಿಯಾಸ್ ಮನು (26), ಬಾಬುಸಪಾಳ್ಯದ ರಂಜಿತ್ಕುಹಮಾರ್ ಅಲಿಯಾಸ್ ಆರ್.ಜೆ(28), ಹೆಬ್ಬಾಳದ ವಿಶ್ವನಾಥನಾಗೇನಹಳ್ಳಿಯ ಅನಿಲ್(37) ಬಂಧಿತ ದರೋಡೆಕೋರರಾಗಿದ್ದಾರೆ.
ಬಂಧಿತರಿಂದ ನಂಬರ್ ಪ್ಲೇಟ್ ಇಲ್ಲದ ಮಾರುತಿ ಸುಜುಕಿ ಇಕೋ ಕಾರ್, ಎಲೆಕ್ಟ್ರಿಕಲ್ ಚೇತಕ್ ಸ್ಕೂಟರ್, ಆಕ್ಟೀವಾ ಸ್ಕೂಟರ್, ಎರಡು ಡ್ಯ್ರಾಗರ್’ಗಳು, ಸ್ಪ್ರೆ ಬಾಟಲ್, ಆರು ಮೊಬೈಲ್’ಗಳು, 5 ಸಾವಿರ ರೂ. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.


ಕಳೆದ ಮಾ.12ರಂದು ಅನನ್ಯ ಪಬ್ಲಿಕ್ ಸ್ಕೂಲ್ ಹತ್ತಿರದ ಹನುಮಣ್ಣ ಎಂಬವರ ಬಾಡಿಗೆ ಮನೆಯಲ್ಲಿದ್ದ ಮೊನು ಗೋಸ್ವಾಮಿರನ್ನು ಮಾತನಾಡಿಸಲು ರಾಜು ಜಟಾಬ್, ಬಿಹಾರಿ ಗೋಸ್ವಾಮಿ, ರವಿ ಶರ್ಮ್ ಹಾಗೂ ಆಜ್ಮೀರ್ ಪಾಲ್ ಬಂದು ಮನೆಯಲ್ಲಿ ಮಾತಾಡುತ್ತಾ ಕುಳಿತಿದ್ದಾಗ ಬಂಧಿತರು ಏಕಾಏಕಿ ಮನೆಗೆ ನುಗ್ಗಿ ಮನೆಯಲ್ಲಿ ಮಾತಾಡುತ್ತ ಕುಳಿತಿದ್ದ ಐವರ ಮುಖಕ್ಕೆ ಕಾರದ ಪುಡಿ ಎರಚಿ ರೂಮ್’ನಲ್ಲಿ ಕೂಡಿಹಾಕಿ ಬಿಹಾರಿ ಗೋಸ್ವಾಮಿಗೆ ಮಚ್ಚಿನಿಂದ ತಲೆಗೆ ಹೊಡೆದು ಮೊಬೈಲ್, ಮೊನು ಗೋಸ್ವಾಮಿಯಿಂದ 27 ಸಾವಿರ ರೂ ನಗದು ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ದರೋಡೆ ಮಾಡಿ ಸುಲಿಗೆ ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಹಾರಿ ಗೋಸ್ವಾಮಿ ನೀಡಿದ ದೂರು ದಾಖಲಿಸಿದ ಸೋಲದೇವನಹಳ್ಳಿ ಪೊಲೀಸ್ ಇನ್ಸ್’ಪೆಕ್ಟರ್ ಗೌತಮ್. ಜೆ. ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



Join Whatsapp