ಜೋಕಟ್ಟೆ: ರಕ್ತದಾನ ಶಿಬಿರ ಉದ್ಘಾಟಿಸಿದ ಅಲ್ಫೋನ್ಸ್ ಫ್ರಾಂಕೋ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜೋಕಟ್ಟೆ ಗ್ರಾಮ ಸಮಿತಿ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ, ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತ ಕೊಟ್ಟು ಬಾಂಧವ್ಯ ಕಟ್ಟು ರಕ್ತದಾನ ಮಾಸಚಾರಣೆಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಜೋಕಟ್ಟೆಯ ಸರಕಾರಿ ಶಾಲೆಯಲ್ಲಿ ನಡೆಯಿತು.

- Advertisement -


ಎಸ್.ಡಿ.ಪಿ.ಐ ಮೂಡಬಿದಿರೆಯ ವಿಧಾನಸಭಾ ಅಭ್ಯರ್ಥಿ ಅಲ್ಫೋನ್ಸ್ ಪ್ರಾಂಕೋ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.


ಎಸ್ .ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಸೀಫ್ ಕೋಟೆಬಾಗಿಲು, ಗ್ರಾಮ ಪಂಚಾಯತ್ ಸದಸ್ಯರಾದ ಪರ್ವೀಝ್ ಅಲಿ, ಶಿಹಾಬ್, ಸಿದ್ದೀಕ್ ಈದ್ಗಾ, ಶಾಲಾ ಅಭಿವೃದ್ಧಿ ಸಂಚಾಲಕ ಮಯ್ಯದ್ದಿ, ರಕ್ತದಾನ ಶಿಬಿರದ ಉಸ್ತುವಾರಿ ಆಶ್ರಫ್ ಗುಡ್ಡೆ ಮುತಾಂದವರು ಉಪಸ್ಥಿತರಿದ್ದರು.



Join Whatsapp