ಇಟ್ಟಿಗೆ ಗೂಡುಗಳಲ್ಲಿ ಉಸಿರುಗಟ್ಟಿ ಐವರು ಕಾರ್ಮಿಕರು ಮೃತ್ಯು

Prasthutha|

ಭೋಪಾಲ್: ಛತ್ತೀಸ್’ಢದ ಮಹಾಸಮುಂದ್ ಜಿಲ್ಲೆಯ ಇಟ್ಟಿಗೆ ತಯಾರಿಕಾ ಗೂಡುಗಳಲ್ಲಿ ಉಸಿರುಗಟ್ಟಿ ಕನಿಷ್ಠ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಇಟ್ಟಿಗೆಗಳನ್ನು ತಯಾರಿಸಲು ಬಳಸುವ ಬೆಂಕಿಯ ಹೊಗೆಯಿಂದಾಗಿ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಈ ಐವರು ಕಾರ್ಮಿಕರು ಮಹಾಸಮುಂದ್ ಜಿಲ್ಲೆಯ ಗದ್’ಪುಲಾಜರ್ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತದಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ.

- Advertisement -


ಕಾರ್ಮಿಕರು ತಾವು ತಯಾರಿಸಿದ ಕೆಲವು ಇಟ್ಟಿಗೆಗಳ ಮೇಲೆ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.



Join Whatsapp