ಮತ್ತೊಮ್ಮೆ ಜಾತಿವಾದಿ ಉಗ್ರರ ಅಟ್ಟಹಾಸ | ಅಂತರ್ ಜಾತಿ ವಿವಾಹವಾದ ಯುವಕನ ಇರಿದು ಹತ್ಯೆ

Prasthutha|

ಚಂಡೀಗಢ : ಹರ್ಯಾಣದಲ್ಲಿ ಅಂತರ್ ಜಾತಿ ವಿವಾಹವಾದ ಯುವಕನೊಬ್ಬನನ್ನು, ಜಾತಿವಾದಿ ಉಗ್ರರು ಇರಿದು ಹತ್ಯೆ ಮಾಡಿದ ಮತ್ತೊಂದು ಘಟನೆ ನಡೆದಿದೆ. 23 ವರ್ಷದ ನೀರಜ್ ಎಂಬಾತ ಹತ್ಯೆಯಾದ ಯುವಕ. ನೀರಜ್ ಮದುವೆಯಾದ ಹುಡುಗಿಯ ಸಹೋದರರು ಈ ಕೃತ್ಯ ಎಸಗಿದ್ದಾರೆ.

- Advertisement -

ಪಾಣಿಪತ್ ನ ಜನನಿಭಿಡ ಮಾರುಕಟ್ಟೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿಗಳು ಯುವಕನಿಗೆ ಇರಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಆರೋಪಿಗಳು ನೀರಜ್ ನನ್ನು ಮಾತುಕತೆಗೆ ಬರುವಂತೆ ಘಟನೆಗೂ ಸ್ವಲ್ಪ ಮೊದಲು ಕರೆದಿದ್ದರು. ಈ ನಡುವೆ, ತಮ್ಮ ಸಹೋದರಿಗೆ ಕರೆ ಮಾಡಿ, ನೀನು ಸ್ವಲ್ಪ ಸಮಯದಲ್ಲೇ ಅಳುವುದಕ್ಕಿದೆ ಎಂದಿದ್ದರು.

- Advertisement -

ಅವರು ನನ್ನ ಸಹೋದರನಿಗೆ ಹಲವು ಬಾರಿ ಬೆದರಿಕೆಯೊಡ್ಡಿದ್ದರು, ನಾವು ಪೊಲೀಸರಲ್ಲಿ ರಕ್ಷಣೆ ಕೇಳಿದ್ದೆವು. ಅವರು ಅದನ್ನು ನಿರ್ಲಕ್ಷಿಸಿದ್ದರು. ಇನ್ನೂ ಹೆಚ್ಚು ಸಾವುಗಳಾಗಲಿವೆ ಎಂದು ಅವರು ಕರೆ ಮಾಡಿ ತಿಳಿಸಿದ್ದಾರೆ ಎಂದು ನೀರಜ್ ನ ಸಹೋದರ ಜಗದೀಶ್ ಹೇಳಿದ್ದಾರೆ.

ಒಂದೂವರೆ ತಿಂಗಳ ಹಿಂದೆಯಷ್ಟೇ ನೀರಜ್ ನ ವಿವಾಹವಾಗಿತ್ತು. ವಿವಾಹಕ್ಕೆ ಸಂಬಂಧಿಸಿ ಹಲವು ಸಲ ಗ್ರಾಮದಲ್ಲಿ ಪಂಚಾಯತ್ ಸಭೆ ನಡೆದಿತ್ತು ಮತ್ತು ವಿವಾಹಕ್ಕೆ ಎರಡೂ ಕಡೆಯವರು ಒಪ್ಪಿದ್ದರು. ಆದರೆ, ಹುಡುಗಿಯ ಅಣ್ಣ ಮಾತ್ರ ಬೆದರಿಕೆಯೊಡ್ಡುತ್ತಲೇ ಇದ್ದ ಎನ್ನಲಾಗಿದೆ.   



Join Whatsapp