ಮಾರಿಕೊಂಡ ಉಳಿದ ಮಾಧ್ಯಮಗಳ ಮೌನ ಇತಿಹಾಸ ಮರೆಯದು: ಎಸ್’ಡಿಪಿಐ

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡೋದು ಒಂದೇ ವಿಚಾರದಲ್ಲಿ. ಅದು ಸತ್ಯ ನುಡಿಯುವವರನ್ನು ಹೆದರಿಸುವುದು, ಅವರ ಮೇಲೆ ದೌರ್ಜನ್ಯ ಎಸಗುವುದರಲ್ಲಿ. ಬಿಬಿಸಿ ಮೇಲಿನ ದಾಳಿ ಅದಕ್ಕೊಂದು ಸ್ಪಷ್ಟ ಉದಾಹರಣೆ. ಸರಕಾರದ ಈ ನಡೆ ಖಂಡನೀಯ. ಮಾರಿಕೊಂಡ ಉಳಿದ ಮಾಧ್ಯಮಗಳ ಮೌನ ಇತಿಹಾಸ ಮರೆಯದು ಎಂದು SDPI  ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಝ್ ಕಡಂಬು ಟೀಕಿಸಿದ್ದಾರೆ.

- Advertisement -

ಬಿಬಿಸಿ ಮೇಲಿನ ಐಟಿ ದಾಳಿಯನ್ನು ಟ್ವೀಟ್ ಮೂಲಕ ಖಂಡಿಸಿರುವ ಅವರು, ಸತ್ಯ ಹೇಳುವವರನ್ನು, ಸರ್ಕಾರದ ದುರಾಡಳಿತವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಲಾಗುತ್ತಿದೆ. ಇದು ಖಂಡನೀಯ ಎಂದು ತಿಳಿಸಿದ್ದಾರೆ.



Join Whatsapp