ಗನ್ ಲೈಸೆನ್ಸ್ ಪಡೆದ ಪ್ರವಾದಿ ನಿಂದಕಿ ನೂಪುರ್ ಶರ್ಮಾ

Prasthutha|

ನವದೆಹಲಿ: ವಿವಾದಾತ್ಮಕ ಹೇಳಿ ನೀಡಿ ಹಿಂಸಾಚಾರಕ್ಕೆ ಕಾರಣವಾಗಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‍ ಶರ್ಮ ಇದೀಗ ತಮಗೆ ಜೀವ ಬೆದರಿಕೆಯಿದೆ ಎಂಬ ಕಾರಣ ನೀಡಿ ಗನ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.

- Advertisement -

ನನಗೆ ಜೀವ ಬೆದರಿಕೆ ಇದೆ, ಹೀಗಾಗಿ ಗನ್ ಲೈಸೆನ್ಸ್ ಅಗತ್ಯವಿದೆ ಎಂದು ಇತ್ತೀಚೆಗೆ ದೆಹಲಿ ಪೊಲೀಸರಿಗೆ ನೂಪುರ್ ಮನವಿ ಸಲ್ಲಿಸಿದ್ದರು. ಜೀವಕ್ಕೆ ಅಪಾಯ ಇರುವುದರಿಂದ ದಿನದ 24 ಗಂಟೆಯೂ ಗನ್ ಅಗತ್ಯವಿದೆ ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಗನ್ ಪರವಾನಿಗೆ ಘಟಕವು ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ನೀಡಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ವರ್ಷ ಟಿವಿಯೊಂದರ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.



Join Whatsapp