ರಸ್ತೆ ಅಪಘಾತ: ಮಂಗಳೂರಿನ ಅಬಕಾರಿ ಸಬ್ ಇನ್’ಸ್ಪೆಕ್ಟರ್ ಮೃತ್ಯು

Prasthutha|

ಉಡುಪಿ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರು ಅಬಕಾರಿ ಇಲಾಖೆಯ ಸಬ್ ಇನ್’ಸ್ಪೆಕ್ಟರ್ ಮೃತಪಟ್ಟ ಘಟನೆ ಉಡುಪಿ ಅಂಬಾಗಿಲಿನಲ್ಲಿ ನಡೆದಿದೆ.

- Advertisement -


ಅಬಕಾರಿ ಇಲಾಖೆಯ ಸಬ್ ಇನ್’ಸ್ಪೆಕ್ಟರ್, ಬ್ರಹ್ಮಾವರ ಉಪ್ಪೂರು ನಿವಾಸಿ ಶಂಕರ್ (52) ಮೃತರು ಎಂದು ಗುರುತಿಸಲಾಗಿದೆ.


ಬೈಕ್’ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp