ಮಂಗಳೂರು: ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳಿಗೆ ಜಾಮೀನು

Prasthutha|

ಮಂಗಳೂರು: ಮೂಲ್ಕಿಯ ಕೆರೆಕಾಡು ಎಂಬಲ್ಲಿ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮಿನು ಮಂಜೂರು ಮಾಡಿದೆ.

- Advertisement -

ಪ್ರಕರಣಕ್ಕೆ  ಸಂಬಂಧಿಸಿದಂತೆ ಕೆಂಚನಕೆರೆ ನಿವಾಸಿ ದವ್ಯೇಶ್‌ ದೇವಾಡಿಗ( 38), ರಾಜೇಶ್ ಮತ್ತು ಯೋಗೀಶ್‌ ಕುಮಾರ್ (46) ಎಂಬವರು ಬಂಧನಕ್ಕೊಳಗಾಗಿದ್ದರು.

ಪೊಲೀಸರು ಭಾನುವಾರ ಬೆಳಿಗ್ಗೆ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರಿಗೂ ಕೋರ್ಟ್ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.

Join Whatsapp