ಮಂಗಳೂರು| ಎರಡು ಲಾರಿಗಳು  ಡಿಕ್ಕಿ; ಇಬ್ಬರು ಚಾಲಕರು ದಾರುಣ ಸಾವು

Prasthutha|

ಮಂಗಳೂರು: ಎರಡು ಲಾರಿಗಳು ಮುಖಾಮುಖಿ  ಡಿಕ್ಕಿಯಾಗಿ ಇಬ್ಬರು ಚಾಲಕರು ಮೃತಪಟ್ಟ ಘಟನೆ ಗುರುಪುರ- ಕೈಕಂಬ ಬಳಿ ನಡೆದಿದೆ.

- Advertisement -

ಮೂಡಬಿದ್ರೆ ಕಡೆಯಿಂದ ಮಣ್ಣುತರುತ್ತಿದ್ದ ಲಾರಿ ಗುರುಪುರದಿಂದ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ಇಳಿಜಾರು ಪ್ರದೇಶದಲ್ಲಿ ನಡೆದ ಕಾರಣ ಲಾರಿಗಳು ರಸ್ತೆ ಬದಿಯ ಹೊಂಡಕ್ಕೆ ಉರುಳಿವೆ. ಎರಡೂ ಲಾರಿಗಳು ಸಂಪೂರ್ಣವಾಗಿ ಜಖಂ ಆಗಿದ್ದು, ಇಬ್ಬರು ಚಾಲಕರ ಮೃತದೇಹ ಹೊರತೆಗೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

ಅಪಘಾತದಿಂದ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಕಾಣಿಸಿಕೊಂಡಿದೆ.  ಘಟನಾ  ಸ್ಥಳದಲ್ಲಿ ಜನರು ಜಮಾಯಿಸಿದ ಕಾರಣ  ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.



Join Whatsapp