ಶಾಸಕ ತನ್ವೀರ್ ಸೇಠ್’ಗೆ ಬಜರಂಗದಳ ಮುಖಂಡನಿಂದ ಕೊಲೆ ಬೆದರಿಕೆ

Prasthutha|

ಬೆಂಗಳೂರು: ಶಾಸಕ ತನ್ವೀರ್ ಸೇಠ್ ಅವರು ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದರೆ, ಅಂದೇ ಅವರ ಅಂತಿಮಯಾತ್ರೆ ಎಂದು ಬಜರಂಗದಳದ ಮುಖಂಡ ರಘು ಸಕಲೇಶಪುರ ಎಂಬಾತ ಕೊಲೆ ಬೆದರಿಕೆ ಹಾಕಿದ್ದಾನೆ.

- Advertisement -


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ವಿಡಿಯೋದಲ್ಲಿ, ಟಿಪ್ಪು ಸುಲ್ತಾನ್ ರಾಜ್ಯ, ದೇಶಕ್ಕೆ ಕಂಟಕ ತಂದಿರುವ ವ್ಯಕ್ತಿ ಇಂತಹ ವ್ಯಕ್ತಿಯ ಒಂದೇ ಒಂದು ಅಡಿ ಪ್ರತಿಮೆ ನಿರ್ಮಾಣವಾದರೂ ಅಂದೆ ಅವರ ಅಂತಿಮಯಾತ್ರೆ ಎಂಬುದಾಗಿ ಬೆದರಿಕೆ ಹಾಕಿದ್ದಾನೆ.

- Advertisement -


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಶಾಸಕ ತನ್ವಿರ್ ಸೇಠ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಸಂಘಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿ, ಕಾನೂನು ಶಿಕ್ಷೆಗೊಳಪಡಿಸಿ ಎಂದು ಆಗ್ರಹಿಸಿದ್ದಾರೆ.



Join Whatsapp