ಜಬಲ್ಪುರ | ನಂಬಿಕೆ ದ್ರೋಹ ಎಸಗಿದ್ದಾಳೆಂದು ಕೊಠಡಿಗೆ ಕರೆಸಿ ಭೀಕರ ಕೊಲೆ, ಬಳಿಕ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೆ

Prasthutha|

- Advertisement -

ಜಬಲ್ಪುರ: ತನಗೆ ನಂಬಿಕೆ ದ್ರೋಹ ಮಾಡಿದ್ದಾಳೆಂದು ಆರೋಪಿಸಿ ರೆಸಾರ್ಟ್ ರೂಮ್ ಗೆ ಕರೆಸಿ ರಕ್ತ ಬರುವ ಹಾಗೆ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶ ರಾಜ್ಯದ ಜಬಲ್ಪುರದಲ್ಲಿ ನಡೆದಿದೆ.

ಘಟನೆ ಬಳಿಕ ವಿಡಿಯೋವೊಂದನ್ನು ಮಾಡಿ ಗೆಳತಿಯ ಇನ್ಸ್ಟಾಗ್ರಾಂ ಪುಟದಿಂದ ಆರೋಪಿ ಹಂಚಿಕೊಂಡಿದ್ದಾನೆ. ಘಟನೆ ನಡೆದು ವಾರ ಕಳೆದರೂ ಆರೋಪಿ ಇನ್ನೂ ಕೂಡ ಬಂಧನವಾಗಿಲ್ಲ ಎಂದು ತಿಳಿದು ಬಂದಿದೆ.

- Advertisement -

ಕೊಲೆ ಮಾಡಿದಾತನನ್ನು ಅಭಿಜಿತ್ ಪಾಟಿದಾರ್ ಎಂದು ಗುರುತಿಸಲಾಗಿದೆ.ಮೃತ ಮಹಿಳೆಯನ್ನು ಶಿಲ್ಪಾ ಝಾರಿಯಾ (22) ಎಂದು ಗುರುತಿಸಲಾಗಿದೆ.

‘ಬೇವಫಾಯಿ ನಹಿ ಕರ್ನೆ ಕಾ’ (ನಂಬಿಕೆ ದ್ರೋಹ ಎಸಗಬೇಡ) ಎಂದು ಹೇಳುತ್ತಾ ರೆಸಾರ್ಟ್‌ನ ಕೊಠಡಿಯೊಳಗೆ ಹೋಗಿ, ಹಾಸಿಗೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆಯ ಶವ ತೋರಿಸುತ್ತಾನೆ. ಬಳಿಕ ಮಹಿಳೆಯ ಮುಖದ ಮೇಲಿನ ಹೊದಿಕೆ ತೆಗೆಯುವ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ನಾನು ಜಬಲ್‌ಪುರದ ಪಠಾಣ್‌ ನಗರದ ನಿವಾಸಿ. ಈಕೆಯನ್ನು ನಾನೇ ಹತ್ಯೆ ಮಾಡಿದ್ದೇನೆ’ ಎಂದು ಇನ್ನೊಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾನೆ.

‘ನವೆಂಬರ್ 08ರಂದು ಹತ್ಯೆ ನಡೆದಿದ್ದು, ಆರೋಪಿಯ ಬಂಧನಕ್ಕೆ ಸರ್ವ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆತ ಅಡಗಿಕೊಂಡಿರುವ ಸ್ಥಳವನ್ನು ಪತ್ತೆಹಚ್ಚಿದ್ದೇವೆ. ಅತೀ ಶೀಘ್ರದಲ್ಲಿ ಬಂಧಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp