ಕೇರಳ: ಸಿಎಂ, ಗವರ್ನರ್ ಕಿತ್ತಾಟ: ಪತ್ರಿಕಾಗೋಷ್ಠಿಯಿಂದ 4 ಟಿವಿ ಚಾನೆಲ್ ಗಳಿಗೆ ನಿಷೇಧ ಹೇರಿದ ಗವರ್ನರ್

Prasthutha|

ತಿರುವನಂತಪುರಂ: ಪತ್ರಿಕಾಗೋಷ್ಠಿಯನ್ನು ವರದಿ ಮಾಡಲು ರಾಜಭವನಕ್ಕೆ ತೆರಳಿದ್ದ ನಾಲ್ಕು ದೂರದರ್ಶನ ವಾಹಿನಿಗಳನ್ನು ಕೇರಳ ರಾಜ್ಯಪಾಲರ ಕಚೇರಿ ನಿಷೇಧಿಸಿದ್ದು, ಕಚೇರಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಗವರ್ನರ್ ನ ಈ ನಡೆಯನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಎಂದು ಆರೋಪಿಸಿ ರಾಜಕೀಯ ಪಕ್ಷಗಳು ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ತೀವ್ರವಾಗಿ ಖಂಡಿಸಿದೆ

- Advertisement -

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪತ್ರಿಕಾಗೋಷ್ಠಿಯ ನಂತರ, ಪತ್ರಕರ್ತರು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಪ್ರತಿಕ್ರಿಯೆಗಾಗಿ ಅವರನ್ನು ಸಂಪರ್ಕಿಸಿದರು, ಆದರೆ  ಪತ್ರಕರ್ತರ ಸೋಗಿನಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಉತ್ತರಿಸುವುದಿಲ್ಲ ಎಂದು ಹೇಳಿ ಪತ್ರಕರ್ತರನ್ನು ಪ್ರವೇಶಿಸದಂತೆ ಆರಿಫ್ ಖಾನ್  ತಡೆದಿದ್ದಾರೆ.

ದಯವಿಟ್ಟು ನನ್ನೊಂದಿಗೆ ಮಾತನಾಡಲು ಬಯಸುವವರು ರಾಜಭವನಕ್ಕೆ ವಿನಂತಿಯನ್ನು ಕಳುಹಿಸಬಹುದು, ನಾನು ನಿಮ್ಮೊಂದಿಗೆ ಮಾತನಾಡುವುದನ್ನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಮಾತ್ರ ನಾನು ನಿಮಗೆ ಹೇಳಬಲ್ಲೆ. ಆದರೆ ನಿಮ್ಮಲ್ಲಿ ಯಾರು ನಿಜವಾದ ಪತ್ರಕರ್ತರು ಮತ್ತು ಮಾಧ್ಯಮದ ಸೋಗಿನಲ್ಲಿ ಕೆಲಸ ಮಾಡುವವರು ಯಾರು ಎಂದು ನನಗೆ ತಿಳಿದಿಲ್ಲ. ಮತ್ತು  ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಲು ನಾನು ಬಯಸುವುದಿಲ್ಲ ಎಂದು ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದ ನಂತರ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.



Join Whatsapp