ವೈಯಕ್ತಿಕ ದ್ವೇಷ: ಸ್ನೇಹಿತನ ಮಗನನ್ನೇ ಅಪಹರಿಸಿ ಗುಂಡಿಕ್ಕಿ ಹತ್ಯೆ

Prasthutha|

ಆಗ್ರಾ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನ ನಾಲ್ಕು ವರ್ಷದ ಮಗನನ್ನು ಅಪಹರಿಸಿ, ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

- Advertisement -

ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ನಡೆದ ಭಂಡಾರ ಎಂಬ ಸಂಘದ ಪದಾಧಿಕಾರಿಗಳ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದು ಹಾಕಲಾಗಿದ್ದು, ಇದರಿಂದ ಇವರಿಬ್ಬರ ನಡುವೆ ಜಗಳ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನ ಮಗನನ್ನು ಅಪಹರಿಸಿ, ಹತ್ಯೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಆಗ್ರಾದ ಛಟ್ಟಾ ವಲಯದ ಅಧಿಕಾರಿ ಸುಕನ್ಯಾ ಶರ್ಮಾ ಮಾತನಾಡಿ, ಈ ಘಟನೆ ಶನಿವಾರ ನಡೆದಿದೆ. ಬಂಟಿ (23) ಎಂದು ಗುರುತಿಸಲಾದ ಆರೋಪಿ 4ರ ಹರೆಯದ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಅಪಹರಿಸಿರುವುದಾಗಿ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ಆರೋಪಿ ಬಂಟಿ, ಬಾಲಕನನ್ನು ಅಪಹರಿಸಿ, ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೊಳಗಾದ ಬಾಲಕ ಮನೆಯವರಿಗೆ ಪತ್ತೆಯಾಗದಿದ್ದಾಗ, ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬಾಲಕನನ್ನು ಹುಡುಕಾಟದ ವೇಳೆ ಆರೋಪಿ ಕೂಡ ಕುಟುಂಬಸ್ಥರೊಂದಿಗೆ ಇದ್ದನು. ಬಾಲಕ ಇರುವ ಜಾಗದ ಬಗ್ಗೆ ಬಾಬಾನೊಬ್ಬ ತನಗೆ ಮಾಹಿತಿ ನೀಡಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಆರೋಪಿ ಸ್ವತಃ ಬಾಲಕನ ಮೃತದೇಹದ ಕಡೆಗೆ ಎಲ್ಲರನ್ನೂ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಂಟಿಯನ್ನು ಬಂಧಿಸಲಾಗಿದೆ.



Join Whatsapp